Advertisement

ಬೆಳ್ತಂಗಡಿಯಲ್ಲಿ ಮನೆಗೆ ಹೋಗುವ ದಾರಿಯ ವಿವಾದ ಕೊಲೆಯಲ್ಲಿ ಅಂತ್ಯ: ಆರೋಪಿ ತಂದೆ-ಮಗ ಸೆರೆ

09:57 AM Feb 11, 2020 | keerthan |

ಬೆಳ್ತಂಗಡಿ: ಸಂಬಂಧಿಗಳ ನಡುವಿನ ಜಾಗದ ವಿವಾದವೊಂದು ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯವಾದ ಘಟನೆ ಇಲ್ಲಿನ ಲಾಯಿಲ ಗ್ರಾಮದ ಪುತ್ರಬೈಲಿನಲ್ಲಿ ನಡೆದಿದೆ. ಸದ್ಯ ಪೊಲೀಸರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.

Advertisement

ರವಿವಾರ ರಾತ್ರಿ ಕೊಲೆ ನಡೆದಿದ್ದು, ಉಮೇಶ್ ಸಮಗಾರ (50 ವರ್ಷ) ಕೊಲೆಯಾದ ವ್ಯಕ್ತಿ.

ತಂದೆ ಮಗ ಸೇರಿ ಈ ಕೊಲೆ ಮಾಡಿದ್ದು, ಆರೋಪಿಗಳಾದ ತಂದೆ ಯೋಗೀಶ್ ಮತ್ತು ಮಗ ಜೀವನ್ ರನ್ನು ಬಂಧಿಸಲಾಗಿದೆ.

ಕೊಲೆಯಾದ ಉಮೇಶ್ ಸಮಗಾರ ಅವರು ಮುಂಬೈನಲ್ಲಿ ಕೆಲಸದಲ್ಲಿದ್ದರು. ಊರಿಗೆ ಬಂದಿದ್ದ ವೇಳೆ ನಿನ್ನೆ ರಾತ್ರಿ ಮನೆಗೆ ಹೋಗುವ ದಾರಿಯ ವಿಚಾರದಲ್ಲಿ ಯೋಗೀಶ್ ಮತ್ತು ಜೀವನ್ ರ ಜೊತೆಗೆ ಜಾಗದ ಬಗ್ಗೆ ಚರ್ಚೆ ನಡೆದಿದೆ. ಈ ವೇಳೆ ಯೋಗೀಶ್ ಮತ್ತು ಜೀವನ್ ಅವರು ಉಮೇಶ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು.

Advertisement

ಮಧ್ಯರಾತ್ರಿ 2.30ರ ಸುಮಾರಿಗೆ ಉಮೇಶ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಆರೋಪಿಗಳಿಬ್ಬರನ್ನು ಸೋಮವಾರ ಬೆಳಿಗ್ಗೆ ಬಂಧಿಸಲಾಗಿದೆ.

ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next