Advertisement

ಮಂಚಿಕೆರೆಯಲ್ಲಿ ಮತ್ತೆ ಭೂಮಿ ಬಿರುಕು

11:05 PM Jun 18, 2019 | Team Udayavani |

ಉಡುಪಿ: ಮಣಿಪಾಲದ ಮಂಚಿಕೆರೆ ನಾಗಬ್ರಹ್ಮಸ್ಥಾನ ಮುಂಭಾಗದ ಕಾಲನಿ ಸಮೀಪದ ಅಡ್ಡರಸ್ತೆಯಲ್ಲಿ ಮಂಗಳವಾರ ಭೂಮಿ ಬಾಯ್ದೆರೆದುಕೊಂಡಿದ್ದು, ಸ್ಥಳೀಯರಲ್ಲಿ ಭೀತಿಗೆ ಕಾರಣವಾಗಿದೆ.

Advertisement

8 ಇಂಚು ಅಗಲ, 200 ಮೀಟರ್‌ ಉದ್ದದವರೆಗೆ ಭೂಮಿ ಬಾಯಿ ಬಿಟ್ಟಿದೆ. ಬಹಳಷ್ಟು ಅಳವೂ ಇದೆ. ಈ ದೃಶ್ಯ ನೋಡಲು ಜನರು ಸ್ಥಳದಲ್ಲಿ ಜಮಾಯಿಸುತ್ತಿದ್ದಾರೆ.

ಇದರ ಸಮೀಪವೇ ಗುಹೆಯೊಂದಿದ್ದು, ಇದರಿಂದಾಗಿ ಇಲ್ಲಿ ಭೂಮಿ ಬಾಯಿ ಬಿಟ್ಟಿದೆಯೋ ಅಥವಾ ಒಳಪದರಲ್ಲಿ ಬಿಸಿ ಹೆಚ್ಚಾಗಿ ಭೂಮಿ ಬಾಯಿ ತೆರೆದಿರಬಹುದೇ ಎಂಬುದು ಸಂಬಂಧಪಟ್ಟ ಇಲಾಖೆಯ ಅಧಿಕಾರಗಳ ಭೇಟಿಯ ಬಳಿಕವಷ್ಟೇ ತಿಳಿಯಬೇಕಾಗಿದೆ.

ಕೆಲವು ದಿನಗಳ ಹಿಂದೆಯೇ ಇಲ್ಲಿ ಸಣ್ಣದಾಗಿ ಭೂಮಿ ಬಾಯಿ ಬಿಟ್ಟಿತ್ತು. ಅದರೆ, ಮಂಗಳವಾರ ಅದರ ಗಾತ್ರ ವಿಸ್ತಾರವಾದ ಕಾರಣ ಸ್ಥಳೀಯರು ಅತಂಕಕ್ಕೆ ಒಳಗಾಗಿ¨ªಾರೆ.

Advertisement

Udayavani is now on Telegram. Click here to join our channel and stay updated with the latest news.

Next