Advertisement

ತೂತುಕುಡಿ: ವೇದಾಂತ ವಿಸ್ತರಣೆಗೆ ಮಂಜೂರಾಗಿದ್ದ ಭೂಮಿ ರದ್ದು

11:46 AM May 29, 2018 | Team Udayavani |

ಚೆನ್ನೈ : ತಮಿಳು ನಾಡಿನ ತೂತುಕುಡಿಯ ವಿವಾದಾತ್ಮಕ ವೇದಾಂತ ಸಮೂಹದ ಪ್ರಸ್ತಾವಿತ ವಿಸ್ತರಣೆಗಾಗಿ ಮಂಜೂರಾಗಿದ್ದ ಭೂಮಿಯನ್ನು ರಾಜ್ಯ ಕೈಗಾರಿಕಾ ಪ್ರೋತ್ಸಾಹನ ನಿಗಮ (ಸಿಪ್‌ಕಾಟ್‌)ಇಂದು ಸೋಮವಾರ ಸಾರ್ವಜನಿಕ ಹಿತಾಸಕ್ತಿಗಾಗಿ ರದ್ದು ಮಾಡಿದೆ.

Advertisement

ಪರಿಸರ ಮಾಲಿನ್ಯಕ್ಕೆ ಕಾರಣವಾಗಿದ್ದ ವಿವಾದಿತ ವೇದಾಂತದ ಸ್ಟೆರ್‌ಲೈಟ್‌ ಕಾಪರ್‌ ಘಟಕವನ್ನು ಶಾಶ್ವತವಾಗಿ  ಮುಚ್ಚಿ ಬೀಗ ಮುದ್ರೆ  ಜಡಿಯುವಂತೆ ರಾಜ್ಯ ಮಾಲಿನ್ಯ ಮಂಡಳಿಗೆ ಆದೇಶಿಸುವ ನಿರ್ಧಾರವನ್ನು ತಮಿಳು ನಾಡು ಸರಕಾರ ಕೈಗೊಂಡ ಕೆಲವೇ ದಿನಗಳಲ್ಲಿ ಈ ನಿರ್ಧಾರ ಬಂದಿರುವುದು ಗಮನಾರ್ಹವಾಗಿದೆ.

ವೇದಾಂತ ವಿರುದ್ಧದ ಹಿಂಸಾತ್ಮಕ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ನಡೆಸಿದ್ದ ಫೈರಿಂಗ್‌ಗೆ 13 ಮಂದಿ ಬಲಿಯಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next