Advertisement
ಗುಡಿಬಂಡೆ ತಾಲ್ಲೂಕು ಎಲ್ಲೋಡು ಗ್ರಾಮ ಪಂಚಾಯ್ತಿಗೆ ಸೇರಿದ ಗುಂಡ್ಲಹಳ್ಳಿ ಗ್ರಾಮದ ಸರ್ವೆ ನಂಬರ್ ೨೦೩ ರಲ್ಲಿ ೧ ಎಕರೆ ಜಮೀನು ವಿಚಾರದಲ್ಲಿ ಉಚ್ಚನ್ಯಾಯಾಲಯದಲ್ಲಿ ತೆರವು ಮಾಡಿ ಸ್ವಾಧೀನದಾರರಿಗೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಉಪವಿಭಾಗಾಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಅದರಂತೆ ವಸತಿ ಮನೆಗಳು ನಿರ್ಮಾಣ ಮಾಡಿಕೊಂಡಿದ್ದ ನಾಲ್ವರಿಗೆ ಮತ್ತು ಉಳಿಕೆ ಜಮೀನಿನ ಹಾಲಿ ಸ್ವಾಧೀನದಾರರಿಗೆ ನೋಟಿಸ್ ನೀಡಲಾಗಿದ್ದರು, ಇನ್ನೂ ತೆರವು ಮಾಡದೇ ಇದ್ದುದ್ದರಿಂದ ತಹಶೀಲ್ದಾರ್ ಸಿಗಬತುಲ್ಲಾ, ಸಿಪಿಐ ಲಿಂಗರಾಜು ಖುದ್ದು ಸ್ಥಳಕ್ಕೆ ಹೊಗಿ ಪರಿಶೀಲನೆ ಮಾಡಿ, ಮನೆ ತೆರವುಗೊಳಿಸುವಂತೆ ಪುನಃ ನಾಲ್ಕು ದಿನಗಳ ಕಾಲಾವಕಾಶ ಕೊಟ್ಟು, ಅವಧಿಯೊಳಗೆ ತೆರೆವು ಮಾಡದೇ ಇದ್ದರೆ ತಾಲ್ಲೂಕು ಅಡಳಿತದಿಂದ ತೆರವು ಮಾಡಲಾಗುವುದು ಎಂದು ತಿಳಿಸಿ ಬಂದಿದ್ದರು. ಆದರೂ ನಾಲ್ಕು ದಿನಗಳ ಅವಧಿ ನಂತರವು ತೆರವುಗೊಳಿಸದ ಕಾರಣ ಮಂಗಳವಾರ ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿ ರಘುನಂದನ್ ನೇತೃತ್ವದಲ್ಲಿ, ಪೊಲೀಸ್ ರಕ್ಷಣೆಯಲ್ಲಿ ಎಲ್ಲಾ ಸಕಲ ಸಿದ್ದತೆಗಳೊಂದಿಗೆ ಸ್ಥಳಕ್ಕೆ ಆಗಮಿಸಿ, ವಾಸವಿದ್ದ ನಾಲ್ಕು ಜನರ ಮನೆಗಳನ್ನು ಹೊರತು ಪಡಿಸಿ ೦-೩೪ ಗುಂಟೆ ಜಮೀನು ಸ್ವತ್ತಿನ ಸ್ವಾಧೀನವನ್ನು ತೆರವುಗೊಳಿಸಿದರು.
Advertisement
ಮನೆಗಳ -ಜಮೀನು ಸ್ವಾಧೀನ ತೆರವು ಕಾರ್ಯಾಚರಣೆ
07:37 PM Sep 14, 2021 | Team Udayavani |
ಪ್ರೊಪೋಸಲ್ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !
Advertisement
Udayavani is now on Telegram. Click here to join our channel and stay updated with the latest news.