Advertisement

ದೀಪವನ್ನೇ ಏಕೆ ಬಳಸಬೇಕು?

03:46 PM May 18, 2021 | Team Udayavani |

ಭಾರತೀಯ ಸಂಸ್ಕೃತಿಯಲ್ಲಿ ದೀಪಕ್ಕೆ ವಿಶೇಷ ಸ್ಥಾನವುಂಟು. ನಿತ್ಯವೂ ಪ್ರಾತಃಕಾಲ- ಸಾಯಂಕಾಲಗಳಲ್ಲಿ ಭಗವಂತನ ಸನ್ನಿಧಿಯಲ್ಲಿ ದೀಪ ಬೆಳಗಿಸುವ ಪದ್ಧತಿ ಪ್ರತಿಮನೆಯಲ್ಲಿಯೂ ಉಂಟು.

Advertisement

“ಪದಾರ್ಥಗಳ ಬೆಲೆ ಏರುತ್ತಿರುವ ಇಂದಿನ ಸನ್ನಿವೇಶದಲ್ಲಿ ಎಣ್ಣೆಗಾಗಿ ಹಣವನ್ನು ವೆಚ್ಚಮಾಡುವುದೇಕೆ? ಇದರಂತೆಯೇ ಬಣ್ಣ-ಆಕಾರಗಳುಳ್ಳ ವಿದ್ಯುತ್‌ಬಲ್ಬ್ಗಳನ್ನು ಬಳಸಿ ಉಳಿತಾಯಮಾಡಬಹುದಲ್ಲವೇ? ಅಥವಾ ಮೇಣದ ಬತ್ತಿಯನ್ನೇಕೆ ಬಳಸಬಾರದು? ಎನ್ನುವವರೂ ಇಲ್ಲದಿಲ್ಲ. ದೀಪ ಬೆಳಗುವಿಕೆಯೇಸಭಾ-ಸಮಾರಂಭಗಳ ಉದ್ಘಾಟನೆಯ ಚಿಹ್ನೆ.ಸಭಾಂಗಣದಲ್ಲಿ ದೀಪಕ್ಕಿಂತಲೂ ನೂರುಪಟ್ಟುಪ್ರಕಾಶಮಾನವಾದ ವಿದ್ಯುದ್ದೀಪಗಳಿರುವಾಗದೀಪದ ಅಗತ್ಯವೇನು? ಇಂಥ ಪ್ರಶ್ನೆಗಳಿಗೆಭಾರತೀಯ ಮಹರ್ಷಿಗಳ ಆಶಯದಲ್ಲಿಯೇ ಉತ್ತರವನ್ನು ಹುಡುಕಬೇಕಾಗಿದೆ.

ಮಹರ್ಷಿಗಳ ಅಂತರಂಗವನ್ನು ಅರಿತಿದ್ದ ಶ್ರೀರಂಗ ಮಹಾಗುರುಗಳ ವಿವರಣೆ ಇಲ್ಲಿ ಉಲ್ಲೇಖಾರ್ಹವಾಗಿವೆ. ಮಹರ್ಷಿಗಳು ಧ್ಯಾನ-ಸಮಾಧಿಯಲ್ಲಿತಮ್ಮೊಳಗೆ ಸರ್ವಮೂಲವಾದ ಪ್ರಕಾಶ ವೊಂದನ್ನುಕಂಡರು. ಅದು ಭೌತಿಕಪ್ರಪಂಚದಲ್ಲೆಲ್ಲೂಕಾಣಸಿಗದ ಮಹದಾನಂದ-ನೆಮ್ಮದಿಗಳನ್ನು ನೀಡುವುದಾಗಿತ್ತು. ಆನಂದಾನುಭವದಪರಾಕಾಷ್ಠೆಯನ್ನು ಮನುಕುಲ ತಲುಪಲೆಂಬಹಿರಿದಾದ ಆಶಯದಿಂದ ಆ ಜ್ಯೋತಿಯನ್ನೇ ಹೋಲುವದೀಪವನ್ನು ನಿತ್ಯವೂ ಬೆಳಗಿಸುವ ಸಂಪ್ರದಾಯವನ್ನು ನಿಯೋಜಿಸಿದರು.

ಸರ್ವಮೂಲ ಜ್ಯೋತಿಯ ಸ್ಮರಣೆಯೇಸರ್ವಕರ್ಮಗಳಮೂಲವಾಗಲೆಂದೇ ಸಭಾ-ಸಮಾರಂಭಗಳ ಪ್ರಾರಂಭದಲ್ಲಿ ದೀಪಬೆಳಗುವಿಕೆ. ಮಹರ್ಷಿಗಳ ಸಂಶೋಧನಾತ್ಮಕ ಬುದ್ಧಿಯು ಮೂಲಜ್ಯೋತಿಯ ವರ್ಣ- ಆಕಾರಗಳನ್ನೇ ಹೊರತರುವ ಬತ್ತಿ-ಎಣ್ಣೆಗಳಸಂಯೋಗವನ್ನು ಪತ್ತೆ ಮಾಡಿತು. ತಾವರೆದಂಟಿನ ಬತ್ತಿ(ಮೃಣಾಳಸೂತ್ರ)-ಅಂದೇಕಾಯಿಸಿದ ಹಸುವಿನ ತುಪ್ಪಗಳ ಯೋಗದಿಂದ ಬೆಳಗುವ ನಿರ್ದಿಷ್ಟ ಪ್ರಮಾಣದ ದೀಪಶಿಖೆಯು ಬಹುಮಟ್ಟಿಗೆ ಒಳಬೆಳಕನ್ನು ಹೋಲುವುದೆಂಬುವುದನ್ನರಿತರು. ಅದರಿಂದ ಹೊರಬರುವ ಹೊಗೆಯೂ ಮನಸ್ಸಿನ ಒಳಸೆಳೆಯುವಿಕೆಗೆ ಪೋಷಕವಾಗುತ್ತದೆ

ಸಣ್ಣ ಹಣತೆಯೇ ದೀಪವನ್ನುಹೊರತರಬಲ್ಲದಾದರೂ ದೀಪಸ್ತಂಭದ ಬಳಕೆಯು ಹೆಚ್ಚು ಔಚಿತ್ಯ ಪೂರ್ಣವಾಗಿದೆ. ಸ್ತಂಭವು ನಮ್ಮೊಳಗಿನ ಮೇರುದಂಡವನ್ನು(ಬೆನ್ನುಹುರಿಯನ್ನು) ಸೂಚಿಸುತ್ತಿದ್ದರೆ ತುದಿಯಲ್ಲಿ ಬೆಳಗುವ ದೀಪಶಿಖೆಯು ಮೇರುದಂಡದ ತುಟ್ಟತುದಿಯಲ್ಲಿ ಸಹಸ್ರಾರಚಕ್ರದಲ್ಲಿ ಪ್ರಜ್ವಲಿಸುವ ಜ್ಯೋತಿ ಯನ್ನು ಪ್ರತಿನಿಧಿಸುತ್ತದೆ. ಆತ್ಮಮಾರ್ಗದ ವಿವಿಧಾಂಶಗಳನ್ನು ಸೂಚಿಸುವವಿವಿಧ ಆಕಾರಗಳ ದೀಪಸ್ತಂಭಗಳನ್ನೂ ನಮ್ಮ ದೇಶದಲ್ಲಿಕಾಣಬಹುದಾಗಿದೆ.

Advertisement

ದೀಪಸ್ತಂಭ-ಅದರಲ್ಲಿನ ದೀಪಗಳು ನಾವುಸಾಗಬೇಕಾಗಿರುವ ಒಳ ಆತ್ಮಮಾರ್ಗದ,ತನ್ಮೂಲಕ ತಲುಪಬಹುದಾದ ಪರಮಾನಂದವೀಯುವ ಪರಂಜ್ಯೋತಿಯ ನಕ್ಷೆಗಳಾಗಿವೆ.

 

-ಮೈಥಿಲಿ ರಾಘವನ್‌

Advertisement

Udayavani is now on Telegram. Click here to join our channel and stay updated with the latest news.

Next