Advertisement

ರಾಬ್ರಿ ಮನೆ ಮುಂದೆ ಸಿಎಂ ನಿತೀಶ್‌ ಕುಮಾರ್‌ ಗೆ No Entry ಬೋರ್ಡ್‌ !

03:22 PM Jul 02, 2018 | Team Udayavani |

ಪಟ್ನಾ : “ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗೆ ನನ್ನ ತಾಯಿ ಮನೆ ಮುಂದೆ ನೋ ಎಂಟ್ರಿ  ಬೋರ್ಡ್‌ ಹಾಕಲು ನಾನು ಬಯಸಿದ್ದೇನೆ’ ಎಂದು ಆರ್‌ಜೆಡಿ ನಾಯಕ ತೇಜ್‌ ಪ್ರತಾಪ್‌ ಯಾದವ್‌ ಹೇಳಿದ್ದಾರೆ.

Advertisement

ನಿತೀಶ್‌ ಕುಮಾರ್‌ ಅವರಿಗೆ ಮಹಾ ಘಟಬಂಧನಕ್ಕೆ ಮರಳುವುದಕ್ಕೆ  ಬಾಗಿಲು ಮುಚ್ಚಲಾಗಿರುವಂತೆ ನನ್ನ ತಾಯಿಯ ಮನೆಗೂ ಅವರಿಗೆ ಪ್ರವೇಶ ಇಲ್ಲ ಎನ್ನುವ ನೋ ಎಂಟ್ರಿ  ಬೋರ್ಡ್‌ ಹಾಕಲು ನಾನು ಬಯಸಿದ್ದೇನೆ ಎಂದು ಆರ್‌ಜೆಡಿ ನಾಯಕ ಹೇಳಿರುವ ಮಾತಿಗೆ ಪ್ರತಿಕ್ರಿಯೆಯಾಗಿ ಜೆಡಿಯು ವಕ್ತಾರ ಮತ್ತು ವಿಧಾನ ಪರಿಷತ್‌ ಸದಸ್ಯರಾಗಿರುವ ನೀರಜ್‌ ಕುಮಾರ್‌ ಅವರು, “ಸಿಬಿಐ, ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆಗೀಗ ಎಂಬಂತೆ ದಾಳಿ ನಡೆಸುವ ಮನೆಯನ್ನು ಪ್ರವೇಶಿಸಲು ಯಾರು ತಾನೆ ಬಯಸುತ್ತಾರೆ’ ಎಂದು ವ್ಯಂಗ್ಯವಾಡಿದ್ದಾರೆ.

ಲಾಲು ಪುತ್ರ ತೇಜ್‌ ಪ್ರತಾಪ್‌ ಯಾದವ್‌ ಅವರ ತಾಯಿ, ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರಿಗೆ ನೀಡಲಾಗಿರುವ ಸರಕಾರಿ ಬಂಗ್ಲೆಯು ಸಿಎಂ ನಿವಾಸವಿರುವ ನಂ.1, ಆ್ಯನೇ ಮಾರ್ಗದಿಂದ ಕೂಗಳತೆಯ ದೂರದಲ್ಲಿ ಇದೆ. 

Advertisement

Udayavani is now on Telegram. Click here to join our channel and stay updated with the latest news.

Next