Advertisement

ಡೈವೋರ್ಸ್‌ಗೆ ಅರ್ಜಿ ಹಾಕಿದ್ದ ಲಾಲು ಪುತ್ರ ತೇಜ್‌ ಪ್ರತಾಪ್ ನಾಪತ್ತೆ !

02:48 PM Nov 06, 2018 | Team Udayavani |

ಪಾಟ್ನಾ: ವಿವಾಹ ವಿಚ್ಛೇಧನಕ್ಕೆ ಅರ್ಜಿ ಹಾಕಿರುವ ಆರ್‌ಜೆಡಿ ಯುವ ನಾಯಕ ತೇಜ್‌ ಪ್ರತಾಪ್‌ ಯಾದವ್‌ ಅವರು ಬೋಧ್‌ಗಯಾದ ಹೊಟೇಲ್‌ನಿಂದ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.

Advertisement

ಜಾರ್ಖಂಡ್‌ಗೆ ತೆರಳಿ ತಂದೆ ಲಾಲು ಪ್ರಸಾದ್‌ ಯಾದವ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ ವಾಪಾಸಾಗುತ್ತಿದ್ದ ವೇಳೆ ಬೋಧ್‌ಗಯಾದ ಹೊಟೇಲ್‌ನಲ್ಲಿ ತಂಗಿದ್ದರು.

ರಾತ್ರಿಯೇ ಭದ್ರತಾ ಸಿಬಂದಿಗಳ ಕಣ್ಣು ತಪ್ಪಿಸಿ ಹೊಟೇಲ್‌ನಿಂದ ತನ್ನ ಕಾರಿನಲ್ಲಿ ಪರಾರಿಯಾಗಿರುವ ತೇಜ್‌ ಪ್ರತಾಪ್‌ ಉತ್ತರಪ್ರದೇಶದ ವೃಂದಾವನದತ್ತ ತೆರಳಿದ್ದಾರೆ ಎನ್ನಲಾಗಿದೆ. 

ಲಾಲು ಅವರೊಂದಿಗೆ ಮಾತುಕತೆ ವೇಳೆ ತೇಜ್‌ ಪ್ರತಾಪ್‌ ವಿಚ್ಛೇಧನ ನೀಡುವ ವಿಚಾರದಿಂದ ಹಿಂದೆ ಸರಿಯಲಿಲ್ಲ ಎಂದು ತಿಳಿದು ಬಂದಿದೆ.

ಆರ್‌ಜೆಡಿ ನಾಯಕ ಚಂದ್ರಿಕಾ ರೈಥೆ  ಪುತ್ರಿಯಾಗಿದ್ದ ಐಶ್ವರ್ಯಾ ರಾಯ್‌ ಅವರನ್ನು ತೇಜ್‌ ಪ್ರತಾಪ್‌ ಅವರು ಮೇ 12 ರಂದು ವಿವಾಹವಾಗಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next