Advertisement

ಸಿದ್ದರಾಮಯ್ಯಗೆ ಸಿಡಿ ಮಾಡಿಸುವ ಮತ್ತು ಬಿಡುಗಡೆ ಮಾಡುವ ಚಾಳಿ

09:18 AM Nov 06, 2019 | keerthan |

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ  ಸಿಡಿ ಮಾಡಿಸುವ ಹಾಗೂ ಬಿಡುಗಡೆ ಮಾಡಿಸುವ ಚಾಳಿಯಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ವಾಗ್ದಾಳಿ ನಡೆಸಿದರು.

Advertisement

ನಗರದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಲಿಂಗಾಯತರ ಬಗ್ಗೆ ಮಾತನಾಡಿದ್ದನ್ನು ಹಾಗೂ ಕುಮಾರಸ್ವಾಮಿ ಒಕ್ಕಲಿಗರ ಬಗ್ಗೆ ಮಾತನಾಡಿದ್ದನ್ನು ಸಿಡಿ ಮಾಡಿಸಿ ಬಿಡುಗಡೆಗೊಳಿಸಿದ್ದು ಸಿದ್ದರಾಮಯ್ಯ ಎಂದು ಆರೋಪಿಸಿದರು.

ಅವರು ತಮ್ಮಂತೆ ಬೇರೆಯವರು ಎಂದು ತಿಳಿದಿದ್ದಾರೆ. ಸಿದ್ದರಾಮಯ್ಯ ಅವರ ಈ ವರ್ತನೆ ಅವರ ಘನತೆಗೆ ಸರಿಯಾದದ್ದು ಅಲ್ಲ. ನನಗೂ ಹುಬ್ಬಳ್ಳಿ ಕೋರ್ ಕಮೀಟಿ ಸಿಡಿಗೂ ಯಾವುದೇ ಸಂಬಂಧ ಇಲ್ಲ. ನಾನೂ ಹುಬ್ಬಳ್ಳಿ ಸಭೆಯಲ್ಲಿ ಹಾಜರಿದ್ದೆ. ಇದರಲ್ಲಿ ಯಾವುದೇ ಶಾಸಕರ ಕೈವಾಡ ಇಲ್ಲ. ಅಂದಿನ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅನರ್ಹಗೊಂಡ ಶಾಕರಿಂದಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಿದೆ ಎಂದರಷ್ಟೇ ಎಂದು ಬಿಎಸ್ ವೈ ಆಡಿಯೋ ಬಗ್ಗೆ ಮಾತನಾಡಿದರು.

ಮುಂದುವರೆದು ಮಾತನಾಡಿದ ಸವದಿ,  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸಹ‌ ಸಿಡಿ ಬಗ್ಗೆ ವಿಚಾರಿಸಿಲ್ಲ. ಸರ್ಕಾರದ ನಿತ್ಯದ ವರದಿ ಕೇಳಿದ್ದಾರಷ್ಟೇ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next