Advertisement

ಲಖ್ವಿ ಪುತ್ರ ನಮ್ಮನ್ನು ಕರೆ ತಂದ  

06:00 AM May 27, 2018 | |

ಲಕ್ನೋ/ಹೊಸದಿಲ್ಲಿ: “ಲಷ್ಕರ್‌-ಎ- ತೊಯ್ಬಾ ಉಗ್ರ ಸಂಘಟನೆ ನಾಯಕ ಝಕೀವುರ್‌ ರೆಹಮಾನ್‌ ಲಖ್ವಿ ಪುತ್ರ ನಮ್ಮನ್ನು ಕರೆತಂದ    ಪುತ್ರನೇ ನಮ್ಮನ್ನು ಎಲ್‌ಓಸಿ ವರೆಗೆ ಕರೆತಂದಿದ್ದ’. ಮಾ.20ರಂದು  ಕುಪ್ವಾರಾದಲ್ಲಿ ನಡೆದಿದ್ದ ಕಾರ್ಯಾಚರಣೆಯಲ್ಲಿ ಬಂಧಿತನಾಗಿದ್ದ ಜಿಹಾದಿಯೊಬ್ಬ ವಿಚಾರಣೆ ವೇಳೆ ಬಹಿರಂಗಪಡಿಸಿದ ಮಾಹಿತಿ ಇದು. ಝಬಿಯುಲ್ಲಾ ಎಂಬಾತ ಎನ್‌ಐಎಗೆ ನೀಡಿದ ಮಾಹಿತಿ ಪ್ರಕಾರ, ಆರು ಮಂದಿಯ ತಂಡಕ್ಕೆ ಲಷ್ಕರ್‌ ನಾಯಕ ಎಕೆ 47 ರೈಫ‌ಲ್‌ಗ‌ಳು, ಒಬ್ಬೊಬ್ಬರಿಗೂ 1 ಲಕ್ಷ ರೂ. ನಗದು, ಖರ್ಜೂರ, ಜೇನುತುಪ್ಪ, 20 ಚಪಾತಿಗಳನ್ನು ನೀಡಿದ್ದ. ನಂತರ ಲಷ್ಕರ್‌ ನಾಯಕ ಲಖೀÌ ಪುತ್ರನೇ ಎಲ್‌ಓಸಿ ವರೆಗೆ ತನ್ನ ಕಾರಿನಲ್ಲಿ ಆ ಉಗ್ರರನ್ನು ಕರೆತಂದಿದ್ದ. ಮುಜಾಫ‌ರಾಬಾದ್‌ನಿಂದ ಸರ್ವಾಲ್‌ ವರೆಗೆ ಡ್ರಾಪ್‌ ನೀಡಿ ವಾಪಸಾಗಿದ್ದ ಎಂದಿದ್ದಾನೆ. ಕುಪ್ವಾರದ ಕಾಡುಗಳಲ್ಲಿ 15 ದಿನಗಳ ಕಾಲ ಕಳೆದಿದ್ದಾಗಿ ಝಬಿಯುಲ್ಲಾ ಹೇಳಿದ್ದಾನೆ. ಮಾ.20ರಂದು ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಉಳಿದ ಐದು ಮಂದಿ ಅಸುನೀಗಿದ್ದರು. ನಾನು ಸೆರೆ ಸಿಕ್ಕಿದೆ ಎಂದು ಆತ ಎನ್‌ಐಎಗೆ ಹೇಳಿದ್ದಾನೆ.

Advertisement

ಸೇನಾ ಶಿಬಿರ ದಾಳಿ: ಉಗ್ರ ವಶಕ್ಕೆ: ಮತ್ತೂಂದು ಮಹತ್ವದ ಬೆಳವಣಿಗೆಯಲ್ಲಿ, 2016ರಲ್ಲಿ ಸೇನೆಯ ನಗ್ರೋಟಾದಲ್ಲಿರುವ ಶಿಬಿರದ ಮೇಲೆ ದಾಳಿ ನಡೆಸಿದ ಪ್ರಕರಣ ಸಂಬಂಧ ಮುನೀರ್‌-ಉಲ್‌-ಹಸನ್‌ ಖಾದ್ರಿ ಎಂಬ ಜೈಶ್‌ ಉಗ್ರನನ್ನು ಎನ್‌ಐಎ ವಶಕ್ಕೆ ಪಡೆದುಕೊಂಡಿದೆ. ನಗ್ರೋಟಾ ಸೇನಾ ಶಿಬಿರದ ದಾಳಿಯಲ್ಲಿ ಇಬ್ಬರು ಅಧಿಕಾರಿಗಳು ಸೇರಿ 7 ಯೋಧರು ಹುತಾತ್ಮರಾಗಿದ್ದರು. ಅಂದಿನ ದಾಳಿಯು ಪಾಕಿಸ್ತಾನ ನಡೆಸಿದ ವ್ಯವಸ್ಥಿತ ಸಂಚು ಎಂದು ಖಾದ್ರಿ ಒಪ್ಪಿಕೊಂಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next