Advertisement

Udupi ರೆಡ್‌ಕ್ರಾಸ್‌ ಸಂಸ್ಥೆಗೆ ಲಕ್ಷಾಂತರ ರೂ. ವಂಚನೆ ಆರೋಪ

11:03 PM Jul 04, 2024 | Team Udayavani |

ಉಡುಪಿ: ರೆಡ್‌ಕ್ರಾಸ್‌ ಸಂಸ್ಥೆಗೆ 10,16,705 ರೂ. ವಂಚನೆ ಮಾಡಲಾಗಿದೆ ಎಂದು ಬೈಲೂರು ಶಾಂತಿನಗರದ ರಾಜೀವ ಅವರು ಉಡುಪಿ ನಗರ ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Advertisement

2020ರಿಂದ 2021ರ ಅವಧಿ ಯಲ್ಲಿ ರೆಡ್‌ಕ್ರಾಸ್‌ ಸಂಸ್ಥೆಯ ಸಭಾಪತಿಯಾಗಿದ್ದ ಶಿವರಾಮ, ಕಾರ್ಯದರ್ಶಿ ಜಯರಾಮ, ಖಜಾಂಚಿ ಅರವಿಂದ, ಆಡಳಿತ ಮಂಡಳಿ ಸದಸ್ಯ ಸನ್ಮತ್‌ ಅವರು ರೆಡ್‌ ಕ್ರಾಸ್‌ ಸಂಸ್ಥೆ ಉಡುಪಿ ಜಿಲ್ಲಾ ಶಾಖೆಯ ಹಣವನ್ನು ಅಪರಾಧಿಕ ಒಳಸಂಚು ನಡೆಸಿ, ಸರಿಯಾದ ಲೆಕ್ಕವನ್ನು ನಿರ್ವಹಿಸದೇ ಒಟ್ಟು 10,16,705 ರೂ.ಗಳನ್ನು ಅಕ್ರಮವಾಗಿ ತಮ್ಮ ಸ್ವಂತಕ್ಕೆ ದುರುಪಯೋಗ ಪಡಿಸಿ ಕೊಂಡಿದ್ದಾರೆ. ಅದರ ಬಗ್ಗೆ ಸರಿಯಾದ ಲೆಕ್ಕ ಪತ್ರಗಳನ್ನು ಪ್ರಸ್ತುತ ಕಾರ್ಯದರ್ಶಿ, ಆಡಳಿತ ಮಂಡಳಿಯ ಮುಂದೆ ಹಾಜರು ಪಡಿಸದೇ ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next