Advertisement

Belve ಕೆನರಾ ಬ್ಯಾಂಕ್‌ ಪ್ರಬಂಧಕರಿಂದ ವಂಚನೆ: ದೂರು ದಾಖಲು

11:06 PM Jul 04, 2024 | Team Udayavani |

ಸಿದ್ದಾಪುರ: ಬೆಳ್ವೆ ಕೆನರಾ ಬ್ಯಾಂಕ್‌ನಲ್ಲಿ ಮಾಡಿದ್ದ 50 ಸಾವಿರ ರೂಪಾಯಿ ಸಾಲವನ್ನು ತೀರಿಸಿದರೂ ಬ್ಯಾಂಕ್‌ ಪ್ರಬಂಧಕ ದಿನೇಶ್‌ ಕೋಟ್ಯಾನ್‌ 5 ಲಕ್ಷ ರೂ. ಸಾಲ ಬಾಕಿ ಇದೆ ಎಂದು ಪಹಣಿ ಪತ್ರದಲ್ಲಿ ನಮೂದು ಮಾಡಿ ವಂಚಿಸಿದ್ದಾರೆ ಎಂದು ಉಡುಪಿ ಕೆಮ್ಮಣ್ಣು ಗುಜ್ಜರಬೆಟ್ಟು ಕೆ. ಸಕುಬಾಯಿ (74) ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಸಕುಬಾಯಿ ಅವರು ಉಡುಪಿ ತಾಲೂಕು ಪಡುತೋನ್ಸೆ ಗ್ರಾಮದ ಸರ್ವೇ ನಂಬರ್‌ 203/6ಎ ಯಲ್ಲಿರುವ 0.40 ಎಕರೆ ಜಾಗದ ಮೇಲೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಮೂಲಕ 2013-14ನೇ ಸಾಲಿನಲ್ಲಿ ಬೆಳ್ವೆ ಕೆನರಾ ಬ್ಯಾಂಕ್‌ನಲ್ಲಿ 50 ಸಾವಿರ ರೂ. ಸಾಲ ಮಾಡಿದ್ದು, ಬಳಿಕ ಮರುಪಾವತಿ ಮಾಡಿದ್ದರು. ಇತ್ತೀಚೆಗೆ ಪಹಣಿ ಪತ್ರ ತೆಗೆಸಿದಾಗ 50 ಸಾವಿರ ರೂ. ಜತೆಯಲ್ಲಿ 5 ಲಕ್ಷ ರೂ. ಹೆಚ್ಚುವರಿಯಾಗಿ ಋಣಭಾರ ಇರುವುದಾಗಿ ದಾಖಲಾಗಿರುವುದು ತಿಳಿದು ಬಂದಿತು.

ಪ್ರಬಂಧಕ ದಿನೇಶ್‌ ಕೋಟ್ಯಾನ್‌ ಅವರು ತನ್ನ ಸಹೋದರ ಮತ್ತು ಸಹೋದರಿಯ ಸಹಿ ಫೋರ್ಜರಿ ಮಾಡಿ, ಫಾರಂ ನಂಬರ್‌ 3 ಡಿಕ್ಲರೇಶನ್‌ ಫಾರಂ ಸೃಷ್ಟಿಸಿ ಅದನ್ನು ಉಡುಪಿಯ ಸಬ್‌ ರಿಜಿಸ್ಟ್ರಾರ್‌ ಕಚೇರಿಗೆ ನೀಡಿ ಪಹಣಿಯಲ್ಲಿ ಸಾಲ ನಮೂದಿಸುವ ಮೂಲಕ ವಂಚಿಸಿದ್ದಾರೆ ಎಂದು ಕೆ. ದೂರಿನಲ್ಲಿ ತಿಳಿಸಲಾಗಿದೆ.

ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next