Advertisement

ನದಿಯಿಂದ ಕೆರೆಗೆ ನೀರು ಪೂರೈಕೆ ; ಬಾವಿಯಲ್ಲಿ ಅಂತರ್ಜಲ ವೃದ್ಧಿ

03:53 PM Apr 13, 2017 | |

ಕಾಪು: ಶಿರ್ವ ಮತ್ತು ಬೆಳ್ಳೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಗಡಿ ಪ್ರದೇಶವಾಗಿರುವ ಪಡುಬೆಳ್ಳೆ – ಪಾಂಬೂರು ಕುರುಡಾ„ ರಾಮಚಂದ್ರ ಪ್ರಭು ಅವರ ಮುತುವರ್ಜಿಯಲ್ಲಿ ಕುರುಡಾ„ ಕೆರೆಯ ಹೂಳೆತ್ತಿ, ನದಿಯಿಂದ ಕೆರೆಗೆ ನೀರನ್ನು ಹರಿಯ ಬಿಡುವ ವಿಶಿಷ್ಟ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಲಾಗಿದೆ.

Advertisement

ನದಿಯ ನೀರನ್ನು ಕೆರೆಗೆ ಹರಿಯ ಬಿಟ್ಟ ಪರಿಣಾಮ ಸಮೀಪದಲ್ಲೇ ಇರುವ ಗ್ರಾಮ ಪಂಚಾಯತ್‌ ಬಾವಿಯಲ್ಲಿ ನೀರಿನ ಮಟ್ಟ ವೃದ್ಧಿಸಿದ್ದು, ಇದರಿಂದಾಗಿ ಗ್ರಾಮಸ್ಥರಿಗೆ ಕುಡಿಯುವ ನೀರನ್ನು ಪೂರೈಸಲು ಸಹಕಾರಿಯಾಗಲಿದೆ.

ಗ್ರಾ. ಪಂ.ಗೆ ಸಂಬಂಧ ಪಟ್ಟ ಬಾವಿಯಲ್ಲಿ ನೀರಿನ ಅಂತರ್ಜಲ ವೃದ್ಧಿಸಿರುವುದರಿಂದ ಮೂರು ಸೆಂಟ್ಸ್‌ ಕಾಲೋನಿಗೆ ಬೆಳ್ಳೆ ಗ್ರಾ. ಪಂ. ಉಪಾಧ್ಯಕ್ಷ ಹರೀಶ್‌ ಶೆಟ್ಟಿ  ನೇತƒತ್ವದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಹರಿಶ್ಚಂದ್ರ ರಾವ್‌, ಗಣೇಶ್‌, ಸಮಾಜ ಸೇವಕ ಹೆನ್ರಿ ಫೆರ್ನಾಂಡಿಸ್‌ ಮೊದಲಾದವರು ಉಪಸ್ಥಿತರಿದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next