Advertisement

“ಕೆಲಸ ಕೊಡಿಸುವುದಾಗಿ ಎರಡು ಬಾರಿ ಮನೆಗೆ ಕರೆದು ಅನ್ಯಾಯ ಮಾಡಿದ್ದಾರೆ”: ದೂರು ನೀಡಿದ ಯುವತಿ

03:20 PM Mar 26, 2021 | Team Udayavani |

ಬೆಂಗಳೂರು: “ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕ ಸಂಬಂಧ ಬೆಳೆಸಿ, ವಿಡಿಯೋ ಕರೆ ಮಾಡಿ ಆಶ್ಲೀಲವಾಗಿ ನಡೆದುಕೊಳ್ಳುವಂತೆ ಪುಸಲಾಯಿಸಿ ಕೆಲಸ ಕೊಡಿಸದೆ ವಂಚಿಸಿ ಜೀವ ಬೆದರಿಕೆ ಹಾಕಿದ್ದಾರೆ” ಇದು ಸಿಡಿ ಪ್ರಕರಣದಲ್ಲಿ ಯುವತಿ ಇಂದು ನೀಡಿದ ದೂರಿನ ಸಾರಾಂಶ.

Advertisement

ವಿಡಿಯೋದಲ್ಲಿ ಇದ್ದಾಳೆನ್ನಲಾದ ಯುವತಿ ಇಂದು ವಕೀಲ ಜಗದೀಶ್ ಅವರ ಮೂಲಕ ಲಿಖಿತ ದೂರನ್ನು ಪೊಲೀಸರಿಗೆ ನೀಡಿದ್ದಾಳೆ.

“ನಾನು ಬೆಂಗಳೂರಿಗೆ ಕೆಲಸಕ್ಕೆಂದು ಬಂದಿದ್ದು, ಕಿರುಚಿತ್ರ ಮಾಡುವ ಸಲುವಾಗಿ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ್ದೆ. ಅವರು ನನ್ನ ಮೊಬೈಲ್  ನಂಬರ್ ಪಡೆದು ಕರೆ ಮಾಡುವುದಾಗಿ ತಿಳಿಸಿದ್ದರು. ಸಚಿವರು ನನ್ನ ಕುಟುಂಬದ ಬಗ್ಗೆ ವಿಚಾರಿಸಿ ಆಪ್ತವಾಗಿ ಮಾತನಾಡುತ್ತಿದ್ದರು.  ನನಗೆ ಸರ್ಕಾರಿ ನೌಕರಿ ನೀಡುವುದಾಗಿ ಹೇಳಿದ್ದರು. ನನ್ನ ಬಳಿ ಲಕ್ಷಾಂತರ ರೂ ಹಣವಿಲ್ಲವೆಂದು ತಿಳಿದ ಅವರು, ಅವರು ಹೇಳಿದಂತೆ ಕೇಳಬೇಕೆಂದು ಹೇಳಿದ್ದರು” ಎಂದು ದೂರಿನಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ : ಸಿಡಿ ಲೇಡಿಯ ಮೂರನೇ ವಿಡಿಯೋ ಬಿಡುಗಡೆ: ವಕೀಲರ ಮೂಲಕ ದೂರು ನೀಡಲು ನಿರ್ಧಾರ

ದೆಹಲಿಯ ಕರ್ನಾಟಕ ಭವನದಲ್ಲಿ ಉಳಿದುಕೊಂಡಿದ್ದ ಅವರು ವಿಡಿಯೋ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿದ್ದರು. ಅವರು ಪ್ರಭಾವಿಯಾದ ಕಾರಣ ಅವರು ಹೇಳಿದಂತೆ ನಾನು ಕೇಳಿದೆ. ನಂತರ ಬೆಂಗಳೂರು ನಿವಾಸಕ್ಕೆ ಬಂದು ಕೆಲಸದ ವಿಚಾರ ಮಾತನಾಡುವುದಿದೆ, ಮನೆಗೆ ಬಾ ಎಂದು ಕರೆದಿದ್ದರು. ಅವರು ಹೇಳಿದ ಅಪಾರ್ಟ್ ಮೆಂಟ್ ಗೆ ಹೋದೆ. ಅವರು ನನ್ನೊಂದಿಗೆ ಅಶ್ಲೀಲವಾಗಿ ಮಾತನಾಡಿ, ಕೋಣೆಯಲ್ಲಿ ಲೈಂಗಿಕ ಕ್ರಿಯೆ ನಡೆಸಿದರು. ಎರಡು ಬಾರಿ ಈ ರೀತಿ ಮಾಡಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

Advertisement

ನನಗೆ ಸರ್ಕಾರಿ ನೌಕರಿ ನೀಡದೆ ಮೋಸ ಮಾಡಿದ್ದಾರೆ. ನಾನು ದೂರು ನೀಡದಂತೆ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ನನಗೆ ಭದ್ರತೆ ಇಲ್ಲದ ಕಾರಣ ನಾನು ಪರಿಚಿತ ವಕೀಲರ ಮೂಲಕ ದೂರು ನೀಡುತ್ತಿದ್ದೇನೆ ಎಂದು ಯುವತಿ ತಿಳಿಸಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next