Advertisement

ಬಾಗೇಪಲ್ಲಿ: ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಲಡ್ಡುಗಳು ವಶ!

04:16 PM Apr 05, 2018 | |

ಜಿಕ್ಕಬಳ್ಳಾಪುರ: ಮತದಾರರಿಗೆ ಹಣ, ಸೀರೆ , ಬಟ್ಟೆಗಳು, ಕುಕ್ಕರ್‌, ಮಿಕ್ಸರ್‌, ಫ್ರಿಡ್ಜ್‌ , ಬಾಡೂಟ ನೀಡುವುದನ್ನು ಕೇಳಿದ್ದೇವೆ ಇದೀಗ ಲಡ್ಡು ನೀಡಿದರೂ ಮತಗಳನ್ನು ಸೆಳೆಯಬಹುದೇ ಎನ್ನುವ ಪ್ರಶ್ನೆ ಮೂಡಿದೆ. 

Advertisement

ಗುರುವಾರ ಬಾಗೇಪಲ್ಲಿಯ  ವೈಪಾಳ್ಯ ದಲ್ಲಿ ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಲಡ್ಡುಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ. 

ಬಿಜೆಪಿ ಮುಖಂಡ,ಟಿಕೆಟ್‌ ಆಕಾಂಕ್ಷಿ ಅರಿಕೆರೆ ಕೃಷ್ಣಾ ರೆಡ್ಡಿ ಎನ್ನುವವರ ಹೆಸರು ಲಡ್ಡುಗಳ ಪ್ಯಾಕೆಟ್‌ನಲ್ಲಿ ನಮೂದಿಸಲಾಗಿತ್ತು ಎಂದು ತಿಳಿದು ಬಂದಿದೆ.  

ಬಿಜೆಪಿ ಬ್ಯಾನರ್‌ ಮತ್ತಿತರ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ಪಾತಪಾಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next