Advertisement

Karnataka: 9 ವರ್ಷ ಕಳೆದು ಕೋರ್ಟ್‌ ಮೆಟ್ಟಿಲೇರಿದ ಅನಿಲ್‌ ಲಾಡ್‌

12:04 AM Feb 02, 2024 | Team Udayavani |

ಬೆಂಗಳೂರು: ತಾನು ಪಡೆದಿದ್ದ ಸಾಲವನ್ನು ಮರುಪಾವತಿಸಿಲ್ಲ ಎಂಬ ಕಾರಣಕ್ಕೆ ಜಮೀನನ್ನು ಬ್ಯಾಂಕ್‌ ಹರಾಜು ಹಾಕಿದ್ದನ್ನು ಪ್ರಶ್ನಿಸಿ ಸುಮಾರು 9 ವರ್ಷ ಕಳೆದು ನ್ಯಾಯಾಲಯದಲ್ಲಿ ಪ್ರಶ್ನಿಸಿದ ಮಾಜಿ ಶಾಸಕ ಅನಿಲ್‌ ಲಾಡ್‌ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ. ಕೋರ್ಟನ್ನು ತಪ್ಪು ದಾರಿಗೆಳೆಯುವ ಹೇಳಿಕೆ ನೀಡಿದ ಅನಿಲ್‌ ಲಾಡ್‌ ಅವರಂಥವರಿಗೆ ನ್ಯಾಯಾಲಯದ ಬಾಗಿಲು ಮುಚ್ಚಿರುತ್ತದೆ ಎಂದು ಹೈಕೋರ್ಟ್‌ ತಿಳಿಸಿದೆ.

Advertisement

ಸಾಲ ವಸೂಲಾತಿ ನ್ಯಾಯಮಂಡಳಿ (ಡಿಆರ್‌ಟಿ) 2015ರಲ್ಲಿ ಹೊರಡಿಸಿದ ಆದೇಶದ ಕಾನೂನು ಬದ್ಧತೆಯನ್ನು ಪ್ರಶ್ನಿಸಿ ಅನಿಲ್‌ ಲಾಡ್‌ ಸಲ್ಲಿಸಿದ ಅರ್ಜಿಯನ್ನು ನ್ಯಾ| ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು.

ಪ್ರಕರಣದಲ್ಲಿ 2014-15ರಲ್ಲಿ ಡಿಆರ್‌ಟಿ ಮುಂದೆ ಲಾಡ್‌ ಅವರು ಹರಾಜು ಪ್ರಶ್ನಿಸಿಲ್ಲ. ಅಲ್ಲದೆ, ಬ್ಯಾಂಕ್‌ ಅವರಿಗೆ ಎರಡು ಬಾರಿ ಇಮೇಲ್‌ ಮೂಲಕ ಮಾರಾಟ ಪ್ರಮಾಣ ಪತ್ರವನ್ನು ಕಳುಹಿಸಿರುವ ಅಂಶ ದಾಖಲೆಗಳಿಂದ ತಿಳಿದು ಬಂದಿದೆ. ಆದರೆ ಈ ಬಗ್ಗೆ ತಮ್ಮ ಗಮನಕ್ಕೆ ಬಂದಿಲ್ಲ ಎನ್ನುವ ಮೂಲಕ ನ್ಯಾಯಾಲಯವನ್ನು ತಪ್ಪುದಾರಿಗೆಳೆಯಲು ಮುಂದಾಗಿ¨ªಾರೆ ಎಂದು ಪೀಠ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next