Advertisement

ಅನುದಾನ ಕೊರತೆ, ಬೀದಿಗೆ ಬಿದ್ದ  ವೃದ್ಧರಿಗಿಲ್ಲ ಆಶ್ರಯ

08:40 PM Jul 29, 2021 | Team Udayavani |

ಕಾರ್ಕಳ: ಇಂದು ಅದೆಷ್ಟೋ ಯುವ ಮನಸ್ಸುಗಳಿಗೆ ಹೆತ್ತವರೇ ಭಾರವಾಗಿದ್ದಾರೆ. ವೃದ್ಧರ ಜೀವನ  ಬೀದಿಗಳಲ್ಲಿ  ಅನಾಥ ಪ್ರಜ್ಞೆಯಲ್ಲೇ  ಕಳೆದು ಹೋಗುವಂತಾಗಿದೆ.

Advertisement

ಸೂಕ್ತ ನೆಲೆ ಸಿಕ್ಕದೆ ನಗರಗಳ ಬೀದಿಗಳ ಫ‌ುಟ್‌ಪಾತ್‌, ಬಸ್‌ಸ್ಟಾಂಡ್‌ಗಳಲ್ಲಿ ಭಿಕ್ಷೆ ಬೇಡಿ ಬದುಕುವ ವೃದ್ಧರ  ಸಂಖ್ಯೆ ಲೆಕ್ಕಕ್ಕೆ ಸಿಗದು. ಮಾನಸಿಕ ಅಸ್ವಸ್ಥರು, ಕಾಯಿಲೆ ಗೊಳಗಾದವರು, ಮನೆಯಿಂದ ಹೊರ ಹಾಕಲ್ಪಟ್ಟವರು  ಇದರಲ್ಲಿ ಸೇರಿದ್ದಾರೆ. ಇಂತವವರನ್ನು  ಸಮಾಜ ಸೇವಕರು, ಪೊಲೀಸರು  ರಕ್ಷಿಸಿ, ವೃದ್ಧಾಶ್ರಮಕ್ಕೋ, ಚಿಕಿತ್ಸೆಗಾಗಿ ಆಸ್ಪತ್ರೆಗೋ ದಾಖಲಿಸಿ ಮಾನವೀಯತೆ  ತೋರುವ ಪ್ರಯತ್ನ ನಡೆಸುತ್ತಾರೆ.  ಆದರೆ ಉಚಿತ ವೃದ್ಧಾಶ್ರಮಗಳು  ಇಲ್ಲದ ಕಾರಣ  ಸಂದಿಗ್ಧತೆಗೆ ಸಿಲುಕುವಂತಾಗಿದೆ.

ಜಿಲ್ಲೆಯಲ್ಲಿ ನೋಂದಣಿಯಾದ 23 ಖಾಸಗಿ ಅನಾಥಾಶ್ರಮಗಳಿವೆ.   ಇಲ್ಲಿ  ಶುಲ್ಕ ದೊಂದಿಗೆ  ವೃದ್ಧರನ್ನು ದಾಖಲಿಸಿ ಕೊಳ್ಳಲಾಗು ತ್ತಿದೆ. ಜಿಲ್ಲೆಯಲ್ಲೊಂದು ವೃದ್ಧರಿಗಾಗಿ ಸರಕಾರಿ ಅನುದಾನಿತ  ವೃದ್ಧಾಶ್ರಮವಿಲ್ಲ.

ಕಳೆದ  ವರ್ಷಕ್ಕೆ  ಹೋಲಿಸಿದರೆ  ಜಿಲ್ಲೆ ಯಲ್ಲಿ  ವೃದ್ಧಾಶ್ರಮ ಅರಸುವವರ ಸಂಖ್ಯೆ ಶೇ. 40ರಷ್ಟು ಏರಿಕೆಯಾಗಿದೆ.  ಹೆತ್ತವರ ಪಾಲನೆ, ಪೋಷಣೆಯ ಜವಾಬ್ದಾರಿಯಿಂದ ಮಕ್ಕಳು ವಿಮುಖರಾದ  ಪರಿಣಾಮ ಬೀದಿಗೆ  ಬೀಳುವ ವೃದ್ಧರ ಸಂಖ್ಯೆ ಹೆಚ್ಚಳವಾಗುತ್ತಿದೆ.

ವೃದ್ಧಾಶ್ರಮಗಳಿಗೆ ಸರಕಾರದ ಅನು ದಾನಗಳು ದೊರಕುತ್ತಿಲ್ಲ. ಈ ಹಿಂದೆ  ಎಚ್‌ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿದ್ದ ಅವಧಿಯಲ್ಲಿ ಉಪವಿಭಾಗಕ್ಕೊಂದು  ಅನಾಥಾಶ್ರಮ, ತಾತ್ಕಾಲಿಕ ಪುನರ್‌ವಸತಿ  ಕೇಂದ್ರ ತೆರೆಯುವ ಬಗ್ಗೆ  ಹೇಳಿದ್ದರು. ಜಿಲ್ಲೆಯಲ್ಲಿ ಉಚಿತ ಸೇವೆ ನೀಡುವ ವೃದ್ಧಾಶ್ರಮಗಳಿದ್ದರೂ  ಕೊರೊನಾ ಇತ್ಯಾದಿ ಆರ್ಥಿಕ ಅಡಚಣೆಯಿಂದ  ದಾನಿ ಗಳನ್ನು ಅವಲಂಬಿಸಿಕೊಂಡು  ಕಷ್ಟದಲ್ಲಿ  ನಡೆಯುತ್ತಿವೆ.

Advertisement

ಒಬ್ಬೊಬ್ಬರದು ಒಂದೊಂದು ಕಥೆ :

ಪೋಷಕರನ್ನು ಸಾಕಲಾಗದೆ ಆಸ್ಪತ್ರೆಗೂ ಅಥವಾ ಇನ್ನೆಲ್ಲಿಗೋ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿ ಅನಂತರ ಅವರನ್ನು ದಿಕ್ಕು ತಪ್ಪಿಸಿ ನಗರದ ಯಾವುದಾದರೊಂದು ಪ್ರದೇಶದಲ್ಲಿ ಬಿಟ್ಟು ಹೋಗಿ ರುವ ಅನೇಕ ಉದಾಹರಣೆ ಗಳಿವೆ. ಮೃತಪಟ್ಟಂತ ಸಂದರ್ಭ ಬಂದು ನೋಡದವರೂ ಇ¨ªಾರೆ.  ಒಬ್ಬೊಬ್ಬರದು ಮನಕಲಕುವ ಕಥೆಗಳಾಗಿರುತ್ತವೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳುತ್ತಾರೆ.

2014ರಲ್ಲಿ  ಜಿಲ್ಲೆಯಲ್ಲಿ  ತೆರೆದ ಹಿರಿಯ ನಾಗರಿಕರ ಸಹಾಯವಾಣಿಗೆ ಇದುವರೆಗೆ 12,093 ಕರೆಗಳು ಬಂದಿವೆ. ತಿಂಗಳಿಗೆ 150ರಿಂದ 200 ಕರೆಗಳು ಬರುತ್ತವೆ ಎನ್ನುತ್ತಾರೆ ಹಿರಿಯ ನಾಗರಿಕ ಸಹಾಯವಾಣಿ ಕೇಂದ್ರದ  ಅಧಿಕಾರಿಗಳು.

ಆಸ್ಪತ್ರೆಯಲ್ಲೇ ಬಾಕಿ :

ಅಸ್ವಸ್ಥರನ್ನು ಸರಕಾರಿ ಆಸ್ಪತ್ರೆಗಳಿಗೆ ಸೇರಿಸಿ, ಅನಂತರದಲ್ಲಿ ಅವರು ಬಿಡುಗಡೆಗೊಂಡರೂ ಎಲ್ಲಿಗೂ ಹೋಗಲಾಗದೆ ಆಸ್ಪತ್ರೆಗಳ ಬೆಡ್‌ಗಳಲ್ಲೇ ಉಳಿಯುತ್ತಿದ್ದಾರೆ. ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ 12 ಮಂದಿ ವಾರಸುದಾರರಿಲ್ಲದ ವೃದ್ಧರು ಬೆಡ್‌ಗಳಲ್ಲೆ  ಬಾಕಿ ಉಳಿದಿದ್ದಾರೆ.

ಇನ್ನೊಂದು ವೃದ್ಧಾಶ್ರಮ ತೆರೆಯುವ ಅಗತ್ಯವಿಲ್ಲ.  ವೃದ್ಧರನ್ನು ಬೀದಿಗೆ  ತಳ್ಳುವವರನ್ನು ಅಪರಾಧಿಗಳನ್ನಾಗಿಸುವ ಕಾನೂನುಗಳು ಜಾರಿಗೆ ಬರಬೇಕು ಎಂದು ಸಮಾಜ ಸೇವಕಿ ರಮಿತಾ ಶೈಲೇಂದ್ರ ಅಭಿಪ್ರಾಯಪಡುತ್ತಾರೆ.

3-4 ವರ್ಷಗಳ ಹಿಂದೆ ಸರಕಾರದ ಅನುದಾನ ಬರುತ್ತಿತ್ತು. ಅನಂತರದಲ್ಲಿ ಬರುತ್ತಿಲ್ಲ.  ಬೀದಿಯಲ್ಲಿ ಅನಾಥರಾಗಿ ವೃದ್ಧರು ಕಂಡುಬಂದಾಗ ನಮ್ಮ ಸಹಾಯವಾಣಿಗೆ ಕರೆಗಳು ಬರುತ್ತವೆ.-ಗಣೇಶ್‌, ಯೋಜನಾ ಸಂಯೋಜಕ, ಹಿರಿಯ ನಾಗರಿಕ ಸಹಾಯವಾಣಿ ಕೇಂದ್ರ ಉಡುಪಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next