Advertisement

ಘನತಾಜ್ಯ ವಿಲೇವಾರಿಗೆ ಭೂಮಿ ಕೊರತೆ

11:06 AM Jun 24, 2023 | Team Udayavani |

ಬೆಂಗಳೂರು: ತ್ಯಾಜ್ಯಮುಕ್ತ ಗ್ರಾಪಂಗಳ ನಿರ್ಮಾ ಣಕ್ಕೆ ಪಣತೊಟ್ಟಿರುವ ಬೆಂಗಳೂರು ನಗರ ಜಿಪಂಗೆ ಇದೀಗ ಘನತ್ಯಾಜ್ಯ ವಿಲೇವಾರಿಗೆ ಭೂಮಿ ಕೊರತೆ ಎದುರಾಗಿದೆ.

Advertisement

ನಗರ ಜಿಲ್ಲಾ ಪಂಚಾಯ್ತಿಯ ಹಲವು ಪ್ರದೇಶಗಳು ಸಿಲಿಕಾನ್‌ ಸಿಟಿಗೆ ಹೊಂದಿಕೊಂಡಿದ್ದು, ದಿನೇ ದಿನೆ ವೇಗವಾಗಿ ಅಭಿವೃದ್ಧಿ ಪಥದತ್ತ ಸಾಗುತ್ತಿವೆ. ಆದರೆ, ಜನಸಂಖ್ಯೆ ಹೆಚ್ಚಿದಂತೆ ಘನತಾಜ್ಯ ಅಧಿಕವಾಗು ತ್ತಿದ್ದು, ಸಮರ್ಪಕ ತಾಜ್ಯವಿಲೇವಾರಿ ಸವಾಲಿನ ಪ್ರಶ್ನೆಯಾಗಿದೆ. ಘನತಾಜ್ಯ ನಿರ್ವಹಣೆಗಾಗಿ ಭೂಮಿ ನೀಡುವಂತೆ ಈ ಹಿಂದೆ ಬೆಂಗಳೂರು ನಗರ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆಯಲ್ಲಿ ಸಲ್ಲಿಸಿತ್ತು. ಆದರೆ, ಸರ್ಕಾರದಿಂದ ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಜಾಗದ ಸಮಸ್ಯೆ ಎದುರಾಗಿದೆ.

ಈ ಹಿಂದೆ ಆನೇಕಲ್‌, ದಾಸನಪುರ, ಹೆಸರುಘಟ್ಟ, ಹುರುಳಿ ಚಿಕ್ಕನಹಳ್ಳಿ ಸೇರಿದಂತೆ ಹಲವು ಗ್ರಾಪಂಗಳ ಕಸ ವಿಲೇವಾರಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೂ ಯಾವುದೇ ರೀತಿ ಪ್ರಯೋಜನವಾಗಿಲ್ಲ. ನಗರ ಜಿಪಂ ವ್ಯಾಪ್ತಿಯಲ್ಲಿ ಸುಮಾರು 86 ಗ್ರಾಪಂಗಳಿದ್ದು, ಹಲವು ಪಂಚಾಯಿತಿಗಳಲ್ಲಿ ಸಮರ್ಪಕ ರೀತಿಯಲ್ಲಿ ಕಸವಿಲೇವಾರಿ ಆಗುತ್ತಿಲ್ಲ. ಇದು ನಗರ ಜಿಲ್ಲಾಡಳಿತಕ್ಕೆ ತಲೆ ನೋವಾಗಿದೆ. ಕೆಲವು ಕಡೆಗಳಲ್ಲಿ ಜನರು ಎಲ್ಲೆಂದರಲ್ಲಿ ಕಸ ಎಸೆದು ಹೋಗುತ್ತಿರುವುದೂ ತೊಡಕಾಗಿದೆ.

ಗ್ರಾಪಂಗಳ ಸ್ವತ್ಛತೆ ದೃಷ್ಟಿಯಿಂದ ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಿದೆ ಎಂದು ಬೆಂ. ನಗರ ಜಿಪಂ ಹಿರಿಯ ಅಧಿಕಾರಿಗಳು ಹೇಳುತ್ತಾರೆ. ರಾಜಧಾನಿ ಬೆಂಗಳೂರಿಗೆ ಜಿಪಂ ಹಲವು ಗ್ರಾಪಂಗಳು ಹೊಂದಿಕೊಂಡಿದ್ದು, ವೇಗವಾಗಿ ಬೆಳೆಯುತ್ತಿವೆ. ರಾಜಧಾನಿ ಒಳಗೆ ಉದ್ಯೋಗ ಮಾಡುವ ಹಲವು ಮಂದಿ ಜಿಪಂ ವ್ಯಾಪ್ತಿ ಹಲವು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ಜನರ ವಾಸವೂ ದಿನೇ ದಿನೆ ಹೆಚ್ಚಾಗುತ್ತಿದ್ದು, ಕಸ ವಿಲೇ ವಾರಿಯೂ ಸವಾಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

68 ಪಂಚಾಯ್ತಿಗಳಲ್ಲಿ ಜಾಗ ಮಂಜೂರು: ಈ ಹಿಂದೆ ಬೆಂ. ನಗರ ಜಿಪಂ ಘನ ತಾಜ್ಯ ನಿರ್ವಹಣೆಗಾಗಿ ಜಾಗ ಗುರುತಿಸುವ ಕೆಲಸಕ್ಕೆ ಮುಂದಾಗಿತ್ತು. ಅದರಲ್ಲಿ ಅಲ್ಪಮಟ್ಟಿನ ಯಶಸ್ಸು ಕಂಡಿದೆ. 86 ಗ್ರಾಪಂಗಳಲ್ಲಿ ಈಗಾಗಲೇ ಸುಮಾರು 68 ಗ್ರಾಪಂಗಳಲ್ಲಿ ಘನ ತಾಜ್ಯ ವಿಲೇವಾ ರಿಗೆ ಜಾಗ ಮಂಜೂರು ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ ಇನ್ನೂ 18 ಪಂಚಾಯಿತಿಗಳಲ್ಲಿ ಘನ ತಾಜ್ಯ ವಿಲೇವಾರಿಗೆ ಜಾಗ ಸಿಕ್ಕಿಲ್ಲ ಎಂದು ಸ್ವಚ್ಛ ಭಾರತ್‌ ಮಿಷನ್‌ನ ಹಿರಿಯ ಅಧಿಕಾರಿಗಳು ಹೇಳುತ್ತಾರೆ.

Advertisement

ಗ್ರಾಪಂ ಮಟ್ಟದಲ್ಲಿ ಘನ ತಾಜ್ಯ ನಿರ್ವಹಣೆ ಘಟಕಗಳನ್ನು ತೆರೆದು ಗ್ರಾಪಂಗಳಿಗೆ ಆದಾಯ ತಂದುಕೊಡುವ ಯೋಜನೆಗಳನ್ನು ಜಿಲ್ಲಾಡಳಿತ ರೂಪಿಸಿದೆ. ರಾಜಾನುಕುಂಟೆ, ಬೆಟ್ಟಲಸೂರು, ಶಾಂತಿಪುರ, ಚಿಕ್ಕಜಾಲ ಸೇರಿದಂತೆ ಹಲವು ಕಡೆಗಳಲ್ಲಿ ಕಸದಿಂದ ಸಾವಯವ ಗೊಬ್ಬರ ತಯಾರಿಸಲಾಗುತ್ತಿದೆ. ಅದೇ ರೀತಿಯಲ್ಲಿ ಎಲ್ಲ ಗ್ರಾಪಂಗಳಲ್ಲಿ ಯೋಜನೆ ಜಾರಿಗೆ ಸಂಬಂಧ ಯೋಜನೆ ರೂಪಿಸಲಾಗಿದೆ. ಆದರೆ, ಜಾಗದ ಸಮಸ್ಯೆ ಯೋಜನೆ ಜಾರಿಗೆ ಅಡ್ಡಿಯಾಗಿದೆ ಎನ್ನುತ್ತಾರೆ.

ಜಿಪಂ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ: ಈ ಹಿಂದೆ ಬೆಂ. ನಗರ ಜಿಪಂನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕಸ ವಿಲೇವಾರಿಗೆ ಜಾಗದ ಕೊರತೆ ಬಗ್ಗೆ ಆಡಳಿತ ಮತ್ತು ಪ್ರತಿ ಪಕ್ಷಗಳ ಸದಸ್ಯರು ಧ್ವನಿ ಎತ್ತಿದ್ದರು. ಜಿಪಂ ವ್ಯಾಪ್ತಿ ಗ್ರಾಮಗಳು ದಿನೇ ದಿನೆ ಬೆಳೆಯುತ್ತಿವೆ. ಜನತೆ ಅಷ್ಟೇ ಪ್ರಮಾಣದ ಸಮಸ್ಯೆಗಳು ಅಧಿಕವಾಗುತ್ತಿವೆ. ಕೆಲವು ಕಡೆಗಳಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡಲಾಗುತ್ತಿದೆ ಎಂಬುವುದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ಅಂದಿನ ಜಿಲ್ಲಾಧಿಕಾರಿಯಾಗಿದ್ದ ಕೆ.ಶ್ರೀನಿವಾಸ್‌ ಅವರು ಬೆಂ. ನಗರ ಜಿಪಂನಲ್ಲಿ ಎಲ್ಲೆಲ್ಲಿ ಸರ್ಕಾರಿ ಜಾಗವಿದೆ ಎಂಬುವುದನ್ನು ಗುರುತಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಒಂದು ವೇಳೆ ಗ್ರಾಪಂ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗವಿದ್ದರೆ ಅದನ್ನು ಘನ ತ್ಯಾಜ್ಯ ವಿಲೇವಾರಿಗೆ ಬಳಕೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದರು.

ಗ್ರಾಮಗಳ ಸ್ವಚ್ಛತೆಗೆ ಬೆಂ. ನಗರ ಜಿಪಂ ಆದ್ಯತೆ ನೀಡಿದೆ. ಆ ಹಿನ್ನೆಲೆಯಲ್ಲಿ ಗ್ರಾಮಗಳ ಹಳ್ಳಿಗಳನ್ನು ಸ್ವತ್ಛವಾಗಿರಿಸಲು ಹಲವು ಕಾರ್ಯಕ್ರಮ ರೂಪಿಸಿದೆ. ಆದರೆ ಜಿಲ್ಲಾಡಳಿತದ ವ್ಯಾಪ್ತಿಯ ಹಲವು ಗ್ರಾಪಂನ ಪ್ರದೇಶಗಳು ಬಿಬಿಎಂಪಿಗೆ ಹೊಂದಿ ಕೊಂಡಿದ್ದು ವೇಗವಾಗಿ ಬೆಳೆಯುತ್ತಿವೆ. ಹೀಗಾಗಿ ಸಮಪರ್ಕ ಕಸವಿಲೇವಾರಿಗೆ ಜಾಗದ ಕೊರತೆ ಎದುರಾಗಿದೆ. ●ಡಾ.ನೋಮೇಶ್‌ ಕುಮಾರ್‌, ಬೆಂ.ನಗರ ಜಿಪಂ ಉಪಕಾರ್ಯದರ್ಶಿ

ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next