Advertisement

ಶಿಡಘಟ್ಲ 7ನೇ ವಾರ್ಡ್‌ನಲ್ಲಿ ಸೌಲಭ್ಯ ಮರೀಚಿಕೆ

04:40 PM Oct 17, 2022 | Team Udayavani |

ಶಿಡ್ಲಘಟ್ಟ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ಮತ್ತು ವಾರ್ಡ್‌ಗಳ ಅಭಿವೃದ್ಧಿಗಾಗಿ ಸರ್ಕಾರ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿದರೂ ಅನುದಾನ ಸಮರ್ಪಕವಾಗಿ ಬಳಕೆಯಾಗದಿರುವುದಕ್ಕೆ ನಗರಸಭೆಯ 7ನೇ ವಾರ್ಡ್‌ ಜೀವಂತ ಸಾಕ್ಷಿಯಾಗಿದೆ.

Advertisement

ನಗರಸಭೆ ಕಚೇರಿಯಿಂದ ಕೇವಲ ಕೂಗಳತೆ ದೂರದಲ್ಲಿರುವ ಈ ವಾರ್ಡ್‌ನಿಂದ ಪ್ರತಿನಿಧಿ ಸುತ್ತಿರುವಸದಸ್ಯೆ ಶಿವಮ್ಮ ಮುನಿರಾಜು ಅವರು ವಾರ್ಡಿನ ಅವ್ಯವಸ್ಥೆಗಳನ್ನು ದರ್ಶನ ಮಾಡಿಸಿದರಲ್ಲದೆ ನಾಗರಿಕರ ಆರೋಗ್ಯದ ಹಿತದೃಷ್ಟಿಯಿಂದ ಸಮಸ್ಯೆಗಳಿಗೆ ಮುಕ್ತಿ ಕಲ್ಪಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಸಿದ್ದಾರ್ಥನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮಧ್ಯಭಾಗದಲ್ಲಿ ಚರಂಡಿಯ ಮೇಲು ಹೊದಿಕೆ ಕಿತ್ತು ಹೋಗಿ ಹಲವು ದಿನಗಳಾದರೂ ಅದನ್ನು ದುರಸ್ತಿಗೊಳಿಸದೇ ಇರುವ ಕಾರಣ ಪ್ರತಿನಿತ್ಯ ನಾಗರಿಕರು ಗುಂಡಿ ತಪ್ಪಿಸಿಕೊಂಡು ಹೋಗಲು ಪರಿತಪಿಸುವಂತಾಗಿದೆ. ಇನ್ನು ಮಳೆಗಾಲದಲ್ಲಿ ಮಾತ್ರ ಚರಂಡಿ ಯಾವುದು ರಸ್ತೆ ಯಾವುದು ಎಂಬುದುಗೊತ್ತಾಗುವುದೇ ಇಲ್ಲ ಎಂದು ಸದಸ್ಯೆ ಶಿವಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ವಾರ್ಡಿನಲ್ಲಿ ಸಮರ್ಪಕವಾಗಿ ಕಸಕಡ್ಡಿಗಳನ್ನು ವಿಲೇವಾರಿ ಮಾಡುತ್ತಿಲ್ಲ ನೈರ್ಮಲ್ಯ ಹದಗೆಟ್ಟಿದೆ ಮಳೆ ನೀರು ಮತ್ತು ಕೊಳಚೆನೀರು ಸರಾಗವಾಗಿ ಹರಿಯಲು ನಿರ್ಮಿಸಿರುವ ಚರಂಡಿ ಸಂಪೂರ್ಣವಾಗಿ ಮುಚ್ಚಿ ಹೋಗಿ ಸೊಳ್ಳೆಗಳ ಆಶ್ರಯತಾಣವಾಗಿ, ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ. ವಾರ್ಡಿನಲ್ಲಿ ನಾಗರಿಕರು ಅನುಭವಿಸುತ್ತಿರುವ ಸಂಕಷ್ಟವನ್ನು ನಗರಸಭೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿದರೂ ಸಮಸ್ಯೆಗಳಿಗೆ ಮುಕ್ತಿ ಇಲ್ಲದಂತಾಗಿದೆ ಜಿಲ್ಲೆಯ ಅಭಿವೃದ್ಧಿಗೆ ಪಣತೊಟ್ಟಿರುವ ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸಿ 7ನೇ ವಾರ್ಡಿಗೆ ಮೂಲ ಸೌಲಭ್ಯ ವ್ಯವಸ್ಥೆಗೆ ಕ್ರಮವಹಿಸಬೇಕು ಎಂದು ಮನವಿ ಮಾಡಿದರು.

ಕುಡಿವ ನೀರು ಪೂರೈಕೆ ಮಾಡುವ ಸಲುವಾಗಿ ವಾರ್ಡ್‌ನಲ್ಲಿ ಕೊಳವೆಬಾವಿ ಕೊರೆಸಲಾಗಿದೆ ಆದರೆ ಕೊಳವೆಬಾವಿನಲ್ಲಿ ಇದ್ದ ಮೋಟರ್‌ ಪಂಪ್‌ಗ್ಳು ಬೇರೆ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಇದರಿಂದ ವಾರ್ಡಿನ ನಾಗರಿಕರಿಗೆ ಟ್ಯಾಂಕರ್‌ಗಳ ಮೂಲಕ ನೀರುಸರಬರಾಜು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನೀರು ಸರಬರಾಜು ವಿಭಾಗದ ಅಧಿಕಾರಿಗಳನ್ನು ಪ್ರಶ್ನಿಸಿದರೆ ಹೊಸ ಪಂಪ್‌ಗ್ಳು ಬಂದಾಗ ಕೊಳವೆಬಾವಿಗೆ ಅಳವಡಿಸಲಾಗುವುದು ಎಂದು ಹಾರಿಕೆ ಉತ್ತರ ನೀಡುತ್ತಾರೆ ಎಂದು ನಗರಸಭಾ ಸದಸ್ಯೆ ಶಿವಮ್ಮ ಮುನಿರಾಜು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಗಂಥಾಲಯ ನಿರ್ಮಾಣಕ್ಕೆ ಮನವಿ :

ನಗರಸಭೆಯ 7ನೇ ವಾರ್ಡ್‌ ವ್ಯಾಪ್ತಿಯಲ್ಲಿರುವ ಸಮುದಾಯ ಭವನದ ಸ್ಥಿತಿ ಶೋಚನೀಯವಾಗಿದೆ. ಅದನ್ನು ನೆಲಸಮಗೊಳಿಸಿ ಅಲ್ಲಿ ವಿದ್ಯಾರ್ಥಿಗಳು ಮತ್ತು ನಾಗರಿಕರ ಅನುಕೂಲಕ್ಕಾಗಿ ಡಿಜಿಟಲ್‌ ಗ್ರಂಥಾಲಯವನ್ನು ನಿರ್ಮಿಸಬೇಕು. ನಗರಸಭೆ ಜಾಗದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರಪುತ್ಥಳಿ ನಿರ್ಮಿಸಬೇಕು ಎಂದು ನಗರಸಭಾ ಸದಸ್ಯೆ ಶಿವಮ್ಮ ನಗರಸಭೆ ಅಧಿಕಾರಿಗಳಿಗೆ ಪತ್ರದ ಮೂಲಕ ಮನವಿ ಸಲ್ಲಿಸದ್ದಾರೆ.

ಮನೆಗಳಿಗೆ ತ್ಯಾಜ್ಯ ಮಿಶ್ರಿತ ನೀರು :

ಪರಿಶಿಷ್ಟ ಜಾತಿ ಮತ್ತು ಪಂಗಡದ ಜತೆಗೆ ಇನ್ನಿತರೆ ಸಮುದಾಯದ ಜನರು ವಾಸಿಸುತ್ತಿರುವ ಈ ವಾರ್ಡ್‌ನಲ್ಲಿ ಕನಿಷ್ಠ ಮೂಲ ಸೌಲಭ್ಯಗಳಿಂದ ಜನ ವಂಚಿತಗೊಂಡಿದ್ದಾರೆ ವಾರ್ಡಿನಲ್ಲಿ ಸುಗುಮ ಸಂಚಾರಕ್ಕಾಗಿ ಸೂಕ್ತ ರಸ್ತೆಗಳಿಲ್ಲ ಇನ್ನೂ ಕುಡಿವ ನೀರು ಸರಬರಾಜು ಮಾಡುವ ಪೈಪ್‌ ಲೈನ್‌ ಚರಂಡಿಯಲ್ಲಿ ಹಾದುಹೋಗಿದ್ದು ಪೈಪು ತೂತಾಗಿ ತ್ಯಾಜ್ಯ ಮಿಶ್ರಿತ ನೀರು ಸಾರ್ವಜನಿಕರ ಮನೆ ಸೇರುತ್ತಿದೆ ಎಂದು ಶಿವಮ್ಮ ಬೇಸರ ವ್ಯಕ್ತಪಡಿಸಿದರು.

ಶಿಡ್ಲಘಟ್ಟ ನಗರದ 7ನೇ ವಾರ್ಡಿನಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುತ್ತೇವೆ. ಚರಂಡಿಯ ಅವ್ಯವಸ್ಥೆ ಮತ್ತುನೈರ್ಮಲ್ಯವನ್ನು ಕಾಪಾಡಲು ಪ್ರಥಮಆದ್ಯತೆ ನೀಡಿ ತಾವೇ ಖುದ್ದಾಗಿ ಪರಿಶೀಲಿಸುತ್ತೇವೆ. -ಆರ್‌.ಶ್ರೀಕಾಂತ್‌ ಪೌರಾಯುಕ್ತ ನಗರಸಭೆ ಶಿಡ್ಲಘಟ್ಟ

Advertisement

Udayavani is now on Telegram. Click here to join our channel and stay updated with the latest news.

Next