Advertisement

ಕೆವಿಸಿ ಫೌಂಡೇಷನ್‌ನಿಂದ ದಿನಸಿ ಕಿಟ್

08:11 PM May 31, 2021 | Team Udayavani |

ರಂಗಪಟ್ಟಣ: ತಾಲೂಕಿನ ಕೆಆರ್‌ಎಸ್‌ ಅರಳಿಕಟ್ಟೆ ಬಳಿಯಲ್ಲಿರುವಮದ್ದೂರ್‌ ಫೈಲ್‌ ಬಡಾವಣೆಯ 300ಬಡ ಕುಟುಂಬಕ್ಕೆ ಮೈಸೂರು ನಗರದಕೆ.ವಿ.ಚಿನ್ನಯ್ಯ ರವರ ಕೆ.ವಿ.ಸಿಫೌಂಡೇಷನ್‌ ವತಿಯಿಂದ ಭಾನುವಾರ ಆಹಾರ ಪದಾರ್ಥಗಳ ದಿನಸಿ ಕಿಟ್‌ಗಳನ್ನು ವಿತರಣೆ ಮಾಡಲಾಯಿತು.

Advertisement

ಕೆ.ವಿ.ಚಿನ್ನಯ್ಯ ರವರ ಕೆ.ವಿ.ಸಿಫೌಂಡೇಷನ್‌ ಪರವಾಗಿ ಗ್ರಾಪಂ ಅಧ್ಯಕ್ಷ ನಾಗೇಂದ್ರಕುಮಾರ್‌ ಅವರು ಬಡಕುಟುಂಬಗಳಿಗೆ ದಿನ ನಿತ್ಯ ಬಳಕೆಆಹಾರ ಧಾನ್ಯ, ಎಣ್ಣೆ, 20 ಕೆ.ಜಿ.ಅಕ್ಕಿವಿತರಣೆ ಮಾಡಲಾಯಿತು. ನಂತರಅಧ್ಯಕ್ಷ ಮಾತನಾಡಿ, ಕೆ.ವಿ.ಚಿನ್ನಯ್ಯರವರು ಕೆಆರ್‌ಎಸ್‌ನಲ್ಲಿ ಹುಟ್ಟಿ ಬೆಳೆದುಇದೀಗ ಮೈಸೂರಿನಲ್ಲಿದ್ದಾರೆ.

ಅವರುಸಹ ಬಡ ಕುಟುಂಬದಿಂದ ಹುಟ್ಟಿಬೆಳೆದು ಉನ್ನತ ಸ್ಥಾನ ಪಡೆದವರಾಗಿದ್ದು,ಬಡ ಜನತೆಗೆ ಕೊರೊನಾ ಸಂದರ್ಭದಲ್ಲಿಸಹಾಯ ಮಾಡಬೇಕೆಂಬ ಉದ್ದೇಶದಿಂದ ತಮ್ಮ ಕೆ.ವಿ.ಸಿ ಫೌಂಡೇಷನ್‌ವತಿಯಿಂದ ಹಲವು ದಿನಗಳಿಂದಆಹಾರ ಧಾನ್ಯಗಳ ದಿನಸಿ ಕಿಟ್‌ನೀಡುತ್ತಿದ್ದಾರೆ ಎಂದರು.

ಕೆ.ವಿ.ಸಿ ಫೌಂಡೇಷನ್‌ ಸದಸ್ಯರಾದವರದಯ್ಯ ಮತ್ತು ನಾರಾಯಣರಾಮು, ಪ್ರಸನ್ನ, ದಿನೇಶ್‌, ಗ್ರಾಪಂಸದಸ್ಯ ರಾದ ಜಗದೀಪ್‌, ಕೆ.ರಾಜು,ಪಾಪಣ್ಣ, ನರಸಿಂಹ, ದೇವರಾಜು,ಮುಖಂಡರಾದ ಗೀತಾ ಇತರರುಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next