Advertisement

ಕುತ್ಪಾಡಿ: ವಾಣಿಜ್ಯ ಕಟ್ಟಡಗಳ ಡ್ರೈನೇಜ್‌ ನೀರು, ತ್ಯಾಜ್ಯ ತೋಡಿಗೆ

11:05 AM May 17, 2022 | Team Udayavani |

ಮಲ್ಪೆ: ಕಡೆಕಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕುತ್ಪಾಡಿ ಬಲಾಯಿಪಾದೆಯ ಗರೋಡಿ ರಸ್ತೆಯ ಬಹುಮಹಡಿ ವಾಣಿಜ್ಯ ಕಟ್ಟಡಗಳ ಡ್ರೈನೇಜ್‌ ನೀರನ್ನು ಕಟ್ಟಡದ ಹಿಂಬದಿಯ ತೋಡಿಗೆ ಹರಿಸುತ್ತಿದ್ದ, ತ್ಯಾಜ್ಯವನ್ನೂ ಈ ತೋಡಿಗೆ ಹಾಕುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕುತ್ಪಾಡಿ ಗ್ರಾಮದ ಬಲಾಯಿಪಾದೆ ಗ್ರಾಮಸ್ಥರು ಕಡೆಕಾರು ಗ್ರಾ.ಪಂ. ಪಿಡಿಒಗೆ ದೂರು ನೀಡಿದ್ದಾರೆ.

Advertisement

ಡ್ರೈನೇಜ್‌ ನೀರು ಹಾಗೂ ತ್ಯಾಜ್ಯ ತೋಡಿನಲ್ಲಿ ತುಂಬಿಕೊಂಡು ವಿಪರೀತ ದುರ್ವಾಸನೆ, ನೀರಿನಿಂದ ಉಂಟಾದ ಸೊಳ್ಳೆಗಳ ಕಾಟದಿಂದಾಗಿ ಈ ಪರಿಸರದ ಜನರಿಗೆ ಡೆಂಗ್ಯೂ, ಮಲೇರಿಯಾ ಮೊದಲಾದ ತೀವ್ರವಾದ ಆರೋಗ್ಯ ಸಮಸ್ಯೆ ಉಂಟಾಗಿದೆ. ಈ ದುರ್ವಾಸನೆಯಿಂದ ಪರಿಸರದಲ್ಲಿ ನಡೆದಾಡಲೂ ಆಗುತ್ತಿಲ್ಲ. ಡ್ರೈನೇಜ್‌ ನೀರಿನಿಂದ ಈ ಭಾಗದ ಬಾವಿಗಳ ನೀರು ಮಲೀನವಾಗಿದೆ.

ಕುತ್ಪಾಡಿ ಗ್ರಾಮದ ಪವಿತ್ರ ವ್ಯಾಘ್ರ ಚಾಮುಂಡಿ ಕ್ಷೇತ್ರದ ಗಡುವಾಡು ಆವರಣ ಈ ತೋಡಿಗೆ ತಾಗಿಕೊಂಡೆ ಇದೆ. ವ್ಯಾಘ್ರ ಚಾಮುಂಡಿ ಗಡುವಾಡು ಆವರಣದಲ್ಲಿ ಪುರಾತನ ಕಾಲದಿಂದಲೂ ಕುತ್ಪಾಡಿ ಗ್ರಾಮದ ಜನರೆಲ್ಲರೂ ಸೇರಿ ಸಂಪ್ರದಾಯ ಪ್ರಕಾರ ವರ್ಷಕ್ಕೆ ಮೂರು ಬಾರಿ ಧಾರ್ಮಿಕ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇದೀಗ ಡ್ರೈನೇಜ್‌ ನೀರು, ತ್ಯಾಜ್ಯದಿಂದಾಗಿ ಮಲೀನವಾಗಿ ಈ ಭಾಗದ ಜನರ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ.

ಉಗ್ರ ಹೋರಾಟದ ಎಚ್ಚರಿಕೆ

ತತ್‌ಕ್ಷಣ ಡ್ರೈನೇಜ್‌ ನೀರು, ತ್ಯಾಜ್ಯವನ್ನು ತೋಡಿಗೆ ಹಾಕುತ್ತಿರುವ ಕಟ್ಟಡಗಳ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಂಡು ಕುತ್ಪಾಡಿ ಗ್ರಾಮದ ಈ ಭಾಗದ ಜನರ ಆರೋಗ್ಯ ಸಮಸ್ಯೆ ಹಾಗೂ ಧಾರ್ಮಿಕ ಭಾವನೆಗಳನ್ನು ಮನಗೊಂಡು ಈ ಸಮಸ್ಯೆಯನ್ನು ಕೂಡಲೇ ಸರಿಪಡಿಸಬೇಕು. ಸಮಸ್ಯೆ ಹೀಗೆಯೇ ಮುಂದುವರಿದಲ್ಲಿ ಕುತ್ಪಾಡಿ ಗ್ರಾಮದ ಜನರೆಲ್ಲ ಸೇರಿ ಸಂಬಂಧಪಟ್ಟ ಇಲಾಖೆಯ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ದೂರಿನಲ್ಲಿ ತಿಳಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next