Advertisement

Kushtagi: ಸಾಲ ಬಾಧೆ ಕೊರಗು; ರೈತ ನೇಣಿಗೆ ಶರಣು

02:55 PM Oct 26, 2023 | |

ಕುಷ್ಟಗಿ: ಮಳೆಯ ಅಭಾವ ಕಾರಣ ಬೆಳೆ ಇಲ್ಲದೇ ಕಂಗಾಲಾದ ರೈತ ಸಾವಿಗೆ ಶರಣಾದ ಘಟನೆ ತಾಲೂಕಿನ ಬೋದೂರು ಗ್ರಾಮದಲ್ಲಿ ನಡೆದಿದೆ. ಪ್ರಸ್ತುತ ಭೀಕರ ಬರಗಾಲದ ಮೊದಲ ರೈತ ಆತ್ಮಹತ್ಯೆ ಪ್ರಕರಣ ಇದಾಗಿದೆ.

Advertisement

ಆತ್ಮಹತ್ಯೆ ಮಾಡಿಕೊಂಡ ರೈತ ಕೃಷ್ಣಪ್ಪ ಲಚಮಪ್ಪ ರಾಠೋಡ್ (50) ಎಂದು ಗುರುತಿಸಲಾಗಿದೆ. ಗುಡಿಕಲಕೇರಿ ಸೀಮಾದಲ್ಲಿ ತೋಟದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬ್ಯಾಂಕ್ ಹಾಗೂ ಖಾಸಗಿ ಸಾಲಬಾಧೆ ಸಹಿಸದೇ ಬೆಳೆ ಬರದೇ ಇದ್ದರೆ ಸಾಲ‌ ವಾಪಸ್ ಕಟ್ಟುವ ಕೊರಗಿನಲ್ಲಿದ್ದ ಮೃತ ರೈತ ಎನ್ನಲಾಗಿದೆ.

ರೈತನ ಶರೀರವನ್ನು ಕುಷ್ಟಗಿ ತಾಲೂಕು ಸರ್ಕಾರಿ ಆಸ್ಪತ್ರೆಗೆ‌ ಮರಣೋತ್ತರ ಪರೀಕ್ಷೆ ತರಲಾಗಿದೆ. ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next