Advertisement

Kushtagi: ವಿದ್ಯುತ್ ಪ್ರವಹಿಸಿದ ಸ್ಟಾರ್ಟರ್ ಬಟನ್ ಸ್ಪರ್ಶಿಸಿ ರೈತ ದುರ್ಮರಣ

02:19 PM Jun 25, 2024 | Team Udayavani |

ಕುಷ್ಟಗಿ: ಸ್ಟಾರ್ಟರ್ ಬಟನ್ ಮೂಲಕ ವಿದ್ಯುತ್ ಪ್ರವಹಿಸಿ ರೈತರೊಬ್ಬರು ದುರಂತ ಸಾವಿಗೀಡಾದ ಘಟನೆ ತಾಲೂಕಿನ ದೊಣ್ಣೆಗುಡ್ಡ ಗ್ರಾಮದಲ್ಲಿ ಜೂ. 25ರ ಮಂಗಳವಾರ ಬೆಳಗ್ಗೆ ನಡೆದಿದೆ.

Advertisement

ಮುದಿಯಪ್ಪ ನಿಂಗಪ್ಪ ಗ್ವಾಡೀ ಮೃತ ರೈತ.

ಮುದಿಯಪ್ಪ ನಿಂಗಪ್ಪ ಎಂದಿನಂತೆ ತಮ್ಮ ತೋಟದ ಮಿಡಿಸೌತೆ (ಗರ್ಕಿನ್), ರೇಷ್ಮೆ ಬೆಳೆಗೆ ನೀರುಣಿಸಲು ಬೆಳಗಿನ ಜಾವ ತೋಟಕ್ಕೆ ಹೋಗಿದ್ದರು. ಸ್ಟಾರ್ಟರ್ ಬಟನ್ ನಲ್ಲಿ‌ ವಿದ್ಯುತ್ ಪ್ರವಹಿಸಿರುವುದು ಗೊತ್ತಾಗದೇ ಬಟನ್ ಸ್ಪರ್ಶಿಸಿದ್ದು, ವಿದ್ಯುತ್ ಸ್ಪರ್ಶಕ್ಕೆ ರೈತ ಒದ್ದಾಡಿದ್ದು, ಈ ವೇಳೆ ಸ್ಟಾರ್ಟರ್ ಬಾಕ್ಸ್ ಅವರ ಮೇಲೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತ ರೈತ ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾನೆ. ಘಟನಾ ಸ್ಥಳಕ್ಕೆ ಜೆಸ್ಕಂ ಇಲಖಾ ಸಿಬ್ಬಂದಿ ಆಗಮಿಸಿ ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next