Advertisement

Kushtagi; ಸೀಮಂತ ಸಂಭ್ರಮದಲ್ಲಿ ಭ್ರೂಣ ಹತ್ಯೆ ನಿಲ್ಲಿಸಿ ಜಾಗೃತಿ

09:24 PM Jan 08, 2024 | Team Udayavani |

ಕುಷ್ಟಗಿ:ತಾಲೂಕಿನ ಕಡೇಕೊಪ್ಪ ಗ್ರಾಮದ ರೇಖಾ ನಿಂಗಪ್ಪ ಜೀಗೇರಿ ಅವರ ಸೀಮಂತ ಕಾರ್ಯಕ್ರಮದಲ್ಲಿ ಹೆಣ್ಣು ಭ್ರೂಣ ಹತ್ಯೆ ಮಹಾ ಅಪರಾಧದ ಬಗ್ಗೆ ಜಾಗೃತಿ ಸಂದೇಶ ಮೂಡಿಸಿದ ಸಾಮಾಜಿಕ ಕಾಳಜಿಯ ಮಾದರಿ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

Advertisement

ರಾಜ್ಯವನ್ನು ಬೆಚ್ಚಿ ಬೀಳಿಸಿದ ಇತ್ತೀಚಿನ ಮಂಡ್ಯ ಜಿಲ್ಲೆ ಅಲೆಮನೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ, ಈ ಬಗ್ಗೆ ಜಾಗೃತಿ ಮೂಡಿಸಲು, ಕಡೇಕೊಪ್ಪ ಗ್ರಾಮದ ನಿಂಗಪ್ಪ ಜೀಗೇರಿ ಮುಂದಾಗಿರುವುದು ಗಮನಾರ್ಹವಾಗಿದೆ.

ಹೆಣ್ಣು ಬ್ರೂಣ ಹತ್ಯೆ ತಡೆಗೆ ಕೇವಲ ಕಾಯ್ದೆ ಕಾನೂನುಗಳಿಂದ ನಿಯಂತ್ರಿಸುವುದು ಕಷ್ಟ ಸಾದ್ಯದ ಪರಿಸ್ಥಿತಿಯಲ್ಲಿ ಕಡೇಕೊಪ್ಪದ ಯುವಕ ನಿಂಗಪ್ಪ ಜೀಗೇರಿ ಅವರ ಸಾಮಾಜಿಕ ಕಾಳಜಿ ಗಮನ ಸೆಳೆದಿದೆ.

ಸೋಮವಾರ ಕಡೇಕೊಪ್ಪ ಗ್ರಾಮದಲ್ಲಿ ತಮ್ಮ ಪತ್ನಿ ರೇಖಾ ಜೀಗೇರಿ ಅವರ ಚೊಚ್ಚಲ ಸೀಮಂತದ ಕುಟುಂಬದ ಕಾರ್ಯಕ್ರಮದಲ್ಲಿ ಹೆಣ್ಣು ಭ್ರೂಣ ಹತ್ಯೆ ಮಹಾ ಅಪರಾಧ ಎನ್ನುವ ಸಾಲುಗಳನ್ನು ಬರೆಯಿಸಿ, ಚಿತ್ರದಲ್ಲಿ ಭ್ರೂಣ ಹತ್ಯೆಗೆ ತಡೆಯುವ ಚಿತ್ರಿಸಿ ಪ್ರದರ್ಶಿಸಿ ಗಮನ ಸೆಳೆದಿದ್ದಾರೆ. ಈ ಕುರಿತು ನಿಂಗಪ್ಪ ಜೀಗೇರಿ ಮಾತನಾಡಿ, ಇದು ಬರೀ ಪ್ರಚಾರಕ್ಕೆ ಅಲ್ಲ ನನ್ನ ನೈತಿಕ ಜವಾಬ್ದಾರಿ ಕೂಡ ಆಗಿದೆ. ಹೆಣ್ಣು ಭ್ರೂಣ ಹತ್ಯೆಯಂತಹ ಮಹಾಪಾಪ ಮಾಡುವವರಿಗೆ ಕಠಿಣ ಕಾನೂನು ಹಾಗೂ ಸಾಮಾಜಿಕ ಜಾಗೃತಿ ಅರಿವು ಮೂಡಿಸುವ ಎಚ್ಚರಿಕೆ ಸಂದೇಶ ಇದಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next