Advertisement

ಕೆಟ್ಟು ನಿಂತ ಬಸ್ಸಿಗೆ ಬೈಕ್ ಡಿಕ್ಕಿ; ಶಾಲಾ ಮುಖ್ಯ ಶಿಕ್ಷಕ ಸ್ಥಳದಲ್ಲೇ ಮೃತ್ಯು

12:00 PM Oct 20, 2022 | Team Udayavani |

ಕುಷ್ಟಗಿ: ಕೆಟ್ಟು ನಿಂತ ಬಸ್ಸಿಗೆ ಬೈಕ್ ಡಿಕ್ಕಿಯಾದ ಪರಿಣಾಮ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ‌ ಮೃತಪಟ್ಟ ಘಟನೆ ಕುಷ್ಟಗಿ ಪಟ್ಟಣದ ಬಳಿ ಬುಧವಾರ ನಡೆದಿದೆ.

Advertisement

ಕುಷ್ಟಗಿ ತಾಲೂಕಿನ ಟಕ್ಕಳಕಿ ಗ್ರಾಮದ ನಿವಾಸಿ, ಶೇಖರಪ್ಪ‌ ನಾಗಪ್ಪ ಕಟೀಗಾರ್ (54) ಮೃತಪಟ್ಟವರು.

ಶೇಖರಪ್ಪ‌ ಅವರು ಕನಕಗಿರಿ ತಾಲೂಕು ಮುಸಲಾಪೂರ ಸರ್ಕಾರಿ ಪ್ರೌಢ ಶಾಲೆಯಲ್ಲಿ‌ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಎಂದಿನಂತೆ ಶಾಲೆಯ ಕೆಲಸ ಮುಗಿಸಿ ಕುಷ್ಟಗಿಗೆ ವಾಪಸ್ಸಾಗುತ್ತಿದ್ದ ಸಂದರ್ಭ ಕುಷ್ಟಗಿ ಪಟ್ಟಣದ ಸಮೀಪದ ಸೋಲಾರ ಪ್ಲಾಂಟ್ ಬಳಿ ಕೆಟ್ಟು ನಿಂತ ಸರ್ಕಾರಿ ಬಸ್ಸಿಗೆ ಬೈಕ್‌ ಡಿಕ್ಕಿಯಾಗಿದೆ. ಹೆಲ್ಮೇಟ್ ಹಾಕದೇ ಸವಾರ ಪ್ರಯಾಣಿಸಿದ್ದರ ಪರಿಣಾಮ ತಲೆಗೆ ತೀವ್ರ ಗಾಯಗೊಂಡು ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅ.20 ರ ಗುರುವಾರ ಬೆಳಗ್ಗೆ ಕುಷ್ಟಗಿ ಸರ್ಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ಬಳಿಕ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.

ಮೃತ ಮುಖ್ಯ ಶಿಕ್ಷಕ ಶೇಖರಪ್ಪ ಅವರು, ಪತ್ನಿ ಇಬ್ಬರು ಪುತ್ರರು, ಓರ್ವ‌ ಪುತ್ರಿಯನ್ನು ಅಗಲಿದ್ದಾರೆ. ಮುಖ್ಯ ಶಿಕ್ಷಕರ ಅಕಾಲಿಕ‌ ನಿಧನಕ್ಕೆ ಮುಸಲಾಪೂರ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಕಂಬನಿ ಮಿಡಿದಿದ್ದಾರೆ. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next