Advertisement

ಕುರುಗೋಡು: ಸಾರಿಗೆ ಬಸ್ –ಬೈಕ್ ನಡುವೆ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು

06:43 PM Feb 14, 2023 | Team Udayavani |

ಕುರುಗೋಡು: ಸಾರಿಗೆ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟ ಘಟನೆ ಬಳ್ಳಾರಿಯ ಮುಖ್ಯ ಹೆದ್ದಾರಿ ರಸ್ತೆಯ ವಿಟಿ ಕ್ಯಾಂಪ್ ಬಳಿ ನಡೆದ ಘಟನೆ ಬೆಳಕಿಗೆ ಬಂದಿದೆ.

Advertisement

ಗಾದಿಗನೂರು ಗ್ರಾಮದ ನಿವಾಸಿ ಕುರುಬರ ಕಲ್ಲಪ್ಪ (41) ಮೃತ ಪಟ್ಟ ವ್ಯಕ್ತಿ ಎಂದು ತಿಳಿದು ಬಂದಿದೆ.

ಜಿಂದಾಲ್ ಕಾರ್ಖಾನೆ ಯಲ್ಲಿ ಕೆಲಸ ಮುಗಿಸಿಕೊಂಡು ಹೆಂಡತಿ ಗ್ರಾಮವಾದ ಸಿಂದಿಗೇರಿಗೆ ಊರಿನ ಹಬ್ಬಕ್ಕೆ ತೆರಳುತ್ತಿರುವಾಗ ಸಿರುಗುಪ್ಪ ಕಡೆಯಿಂದ ಬರುತಿದ್ದ ಸಾರಿಗೆ ಬಸ್, ಬಳ್ಳಾರಿ ಮಾರ್ಗವಾಗಿ ಬರುತಿದ್ದ ಬೈಕ್ ನಡುವೆ ಸಂಭವಿಸಿದೆ.

ಸ್ಥಳಕ್ಕೆ ಕುರುಗೋಡು ಪಿಎಸ್ಐ ಸಣ್ಣ ಈರೇಶ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next