Advertisement

ಕುಪ್ವಾರಾ ಎನ್‌ಕೌಂಟರ್‌; 4 ಯೋಧರು ಹುತಾತ್ಮ, 8 ಮಂದಿಗೆ ಗಾಯ

01:33 PM Mar 01, 2019 | udayavani editorial |

ಹೊಸದಿಲ್ಲಿ : ಜಮ್ಮು ಕಾಶ್ಮೀರದ ಕುಪ್ವಾರಾದಲ್ಲಿ  ಉಗ್ರರ ವಿರುದ್ಧ ಇಂದು ಶುಕ್ರವಾರ ನಡೆಯುತ್ತಿರುವ ಸೇನಾ ಕಾರ್ಯಾಚರಣೆಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದು, ಎಂಟು ಭದ್ರತಾ ಸಿಬಂದಿಗಳು ಗಾಯಗೊಂಡಿರುವುದಾಗಿ ವರದಿಯಾಗಿದೆ.

Advertisement

ಪಾಕಿಸ್ಥಾನ ತನ್ನ ವಶದಲ್ಲಿ ಇರಿಸಕೊಂಡಿದ್ದ  ಭಾರತೀಯ ವಾಯು ಪಡೆಯ ಪೈಲಟ್‌ ಅಭಿನಂದನ್‌ ವರ್ಧಮಾನ್‌ ಅವರನ್ನು ಬಿಡುಗಡೆ ಮಾಡಿರುವ ಹೊರತಾಗಿಯೂ ಭಾರತೀಯ ಸೇನೆ ಎಲ್‌ಓಸಿ ಉದ್ದಕ್ಕೂ ಕಟ್ಟೆಚ್ಚರವನ್ನು ಮುಂದುವರಿಸಿದೆ. 

ಭಾರತ – ಪಾಕ್‌ ಉದ್ವಿಗ್ನತೆ ಮುಂದುವರಿದಿರುವುದರಿಂದ ಭಾರತೀಯ ಭದ್ರತಾ ಪಡೆಗಳು ಗಡಿಯಾಚೆಗಿನ ವಿದ್ಯಮಾನಗಳತ್ತ ಸೂಕ್ಷ್ಮ ದೃಷ್ಟಿ ನೆಟ್ಟಿರುವುದಾಗಿ ಸೇನಾ ಮೂಲಗಳು ತಿಳಿಸಿವೆ. 

ತಾಜಾ ವರದಿಗಳ ಪ್ರಕಾರ ಪಾಕ್‌ ಸೇನೆ ಜಮ್ಮು ಕಾಶ್ಮೀರದ  ಮೇಂಧರ್‌, ಬಾಲಾಕೋಟ್‌ ಮತ್ತು ಕೃಷ್ಣ ಘಾಟಿ ವಲಯದಲ್ಲಿ ಕದನ ವಿರಾಮ ಉಲ್ಲಂಘನೆ ಗದೈ ಎಲ್‌ಓಸಿ ಉದ್ದಕ್ಕೂ ಗುಂಡಿನ ದಾಳಿ ನಡೆಸುತ್ತಿದೆ. ಭಾರತೀಯ ಸೇನೆ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next