Advertisement

ಕುಂಜೂರು: ಅಂಗನವಾಡಿ ಮುಂಭಾಗದ ತ್ಯಾಜ್ಯಕ್ಕೆ ಮುಕ್ತಿ

06:00 AM Jul 05, 2018 | Team Udayavani |

ಕಾಪು: ಕುಂಜೂರು ಅಂಗನವಾಡಿ ಮುಂಭಾಗದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತಿದ್ದ ತ್ಯಾಜ್ಯದ ಕೊಂಪೆಗೆ ಎಲ್ಲೂರು ಗ್ರಾ. ಪಂ. ತತ್‌ಕ್ಷಣ ಮುಕ್ತಿ ನೀಡಿದೆ. ಸ್ಥಳದಲ್ಲಿದ್ದ ತ್ಯಾಜ್ಯವನ್ನು ವಿಲೇವಾರಿ ಮಾಡಿ, ಹಸಿರು ಗಿಡಗಳನ್ನು ನೆಟ್ಟು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿರುವ ಗ್ರಾ.ಪಂ. ಆಡಳಿತದ ಬಗ್ಗೆ ಜನ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

Advertisement

ಜು. 2ರ‌ಂದು ಪ್ರಕಟವಾಗಿದ್ದ ಅಂಗನವಾಡಿ ಎದುರಲ್ಲೇ ತ್ಯಾಜ್ಯ; ಸಾಂಕ್ರಾಮಿಕ ರೋಗ ಭೀತಿ ಶೀರ್ಷಿಕೆಯ ವರದಿಯಿಂದಾಗಿ ಕೂಡಲೇ ಎಚ್ಚೆತ್ತು ಕೊಂಡಿರುವ ಎಲ್ಲೂರು ಗ್ರಾ.ಪಂ. ಕಸ – ತ್ಯಾಜ್ಯವನ್ನು ತೆರವುಗೊಳಿಸಿ, ತ್ಯಾಜ್ಯದ ರಾಶಿಯಿದ್ದ ಪ್ರದೇಶವನ್ನು ಶುಚಿಗೊಳಿಸಿದೆ.

ಕಸ ಮಾಯ -ಬಾಳೆ ಗಿಡ ಪ್ರತ್ಯಕ್ಷ 
ಇಲ್ಲಿನ ಸಮಸ್ಯೆ ಪರಿಹಾರಕ್ಕೆ ಎಲ್ಲೂರು ಗ್ರಾ.ಪಂ. ಆಡಳಿತ ವ್ಯವಸ್ಥೆ ಮತ್ತು ಅಭಿವೃದ್ಧಿ ಅಧಿಕಾರಿ ಕೂಡಲೇ ಸ್ಪಂದಿಸಿದ್ದು, ಮಂಗಳವಾರ ಸಂಜೆ ಜೆಸಿಬಿ ಮೂಲಕ ಹೊಂಡ ತೆಗೆದು ತ್ಯಾಜ್ಯ ವಿಲೇವಾರಿ ಮಾಡಿಸಿದೆ, ಮಾತ್ರವಲ್ಲದೆ ಜನರು ಮುಂದೆ ಇಲ್ಲಿ ಕಸ ಎಸೆಯದಂತೆ ಜಾಗೃತಿಗಾಗಿ ಬಾಳೆ ಗಿಡಗಳನ್ನು ನೆಡಲಾಗಿದೆ. 

ಬೋರ್ಡ್‌ ಅಳವಡಿಕೆಗೆ ಚಿಂತನೆ 
ಇಲ್ಲಿ ಕಸ – ತ್ಯಾಜ್ಯ ಎಸೆಯಬಾರದೆಂದು ದುರ್ಗಾ ನಗರದ ಜನರಿಗೆ ಈಗಾಗಲೇ ಹಲವು ಬಾರಿ ಮನವಿ ಮಾಡಲಾಗಿತ್ತು. ಆದರೂ ಜನ ಇಲ್ಲೇ ಕಸ ಎಸೆದು ಹೋಗಿದ್ದರಿಂದ ಇದು ತ್ಯಾಜ್ಯದ ಕೊಂಪೆ ಬೆಳೆಯುವಂತಾಗಿತ್ತು. ಮುಂದೆ ಇಲ್ಲಿ ಕಸ ಎಸೆಯು ವುದನ್ನು ನಿಷೇಧಿಸಲಾಗಿದೆ ಎಂಬ ಬೋರ್ಡ್‌ ಅಳವಡಿಸಲು ಚಿಂತನೆ ನಡೆಸಲಾಗಿದೆ ಎಂದು ಎಲ್ಲೂರು ಗ್ರಾ.ಪಂ. ಸದಸ್ಯ ಸತೀಶ್‌ ಶೆಟ್ಟಿ ಗುಡ್ಡೆಚ್ಚಿ ಉದಯವಾಣಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next