Advertisement

ಕುಣಿಗಲ್: ಸಾಲಗಾರರ ಕಿರುಕುಳ ತಾಳಲಾರದೆ ಮನನೊಂದು ಗೃಹಿಣಿ ಆತ್ಮಹತ್ಯೆ

10:16 PM Jun 01, 2023 | Team Udayavani |

ಕುಣಿಗಲ್: ಸಾಲಗಾರರ ಕಿರುಕುಳ ತಾಳಲಾರದೆ ಮನನೊಂದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹುತ್ರಿದುರ್ಗ ಹೋಬಳಿ ಗಿಡದದಾಸನಪುರ ಗ್ರಾಮದಲ್ಲಿ ಗುರುವಾರ ನಡೆದಿದೆ.

Advertisement

ಗಿಡದದಾಸನಪುರ ಗ್ರಾಮದ ಪವಿತ್ರ ( 25 ) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ,

ಘಟನೆ ವಿವರ: ಪವಿತ್ರ ಹಾಗೂ ಇಕೆಯ ಗಂಡ ಆನಂದ್ ವಿವಿಧ ಸಂಘಗಳಲ್ಲಿ (ಪೈನಸ್ಸ್) 3.50 ಲಕ್ಷಕ್ಕೂ ಅಧಿಕ ಹಣ ಸಾಲ ಪಡೆದಿದ್ದರು ಎನ್ನಲಾಗಿದ್ದು, ಸಾಲಾ ಮರುಪಾವತಿ ಮಾಡಿರಲಿಲ್ಲ, ಈ ಸಂಬಂಧ ಸಾಲ ನೀಡಿದದರು ಪದೇ ಪದೇ ಮನೆ ಬಳಿಗೆ ಬಂದು ಸಾಲದ ಕತ್ತಿನ ಹಣವನ್ನು ಪಾವತಿಸುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದ್ದು, ಇದರಿಂದ ಮೃತ ಪವಿತ್ರ ಅವಳ‌ ಪತಿ ಆನಂದ್ ಸಾಲಗಾರರ ಹಿಂದೆ ತಾಳಲಾರದೆ ಕಳೆದ ಒಂದು ವಾರದ ಹಿಂದೆ ಮನೆ ಬಿಟ್ಟು ಹೊದವರು ಈವರೆಗೂ ಮನೆಗೆ ಹಿಂದಿರಿಗಿಲ್ಲ, ಇದರಿಂದ ಗಾಬರಿಗೊಂಡ ಪವಿತ್ರ ತನ್ನ ತವರು‌ ಮನೆ ನೆಲಮಂಗಲದ ಜಗ್ಗಸಂದ್ರ ಗ್ರಾಮಕ್ಕೆ ಹೋಗಿದರು, ಈ ವಿಚಾರ ತಿಳಿದ ಸಾಲಗಾರರು ಜಗ್ಗಸಂದ್ರ ಗ್ರಾಮಕ್ಕೆ ಹೋಗಿ ಸಾಲದ ಹಣ ಈಗಲೇ ಕಟ್ಟಬೇಕೆಂದು ತೀವ್ರವಾಗಿ ಒತ್ತಾಯಿಸಿ ಬಳಿಕ ಮಂಗಳವಾರದಂದೇ ಗಿಡದದಾಸನಪುರ ಗ್ರಾಮಕ್ಕೆ ಪವಿತ್ರಳನ್ನು ಸಾಲಗಾರರು ಕರೆದುಕೊಂಡು ಬಂದರು, ಬಳಿಕ ಶನಿವಾರ ಬರುತ್ತೇವೆ ಅಷ್ಟರ ಒಳಗೆ ನಮ್ಮ ಹಣ ಕೊಡಬೇಕು, ಎಂದು ಗಡುವು ನೀಡಿ ಹೊದರು ಎನ್ನಲಾಗಿದೆ, ಶನಿವಾರ ಎಲ್ಲಿದ ಹಣ ತಂದು ಕಟ್ಟಲಿ ಎಂದು ಯೋಚನೆ ಮಾಡಿದ ಪವಿತ್ರ ಮನೆಯ ಪ್ಯಾನಿಗೆ ಸೀರೆ ಹಾಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಈ ಸಂಬಂದ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ದೇವರಿಗೇ ಪಾಠ ಮಾಡಬಲ್ಲರು ಪಿಎಂ ಮೋದಿ: Rahul Gandhi 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next