Advertisement

ಸಚಿವರ ಕಾರ್ಯಕ್ರಮಕ್ಕಾಗಿ ರಸ್ತೆ ಬಂದ್ : ನಾಗರಿಕರ ಆಕ್ರೋಶ

09:39 PM Oct 01, 2021 | Team Udayavani |

ಕುಣಿಗಲ್ : ಮಂತ್ರಿಗಳ ಕಾರ್ಯಕ್ರಮದ ಸಭೆಗೆ ಹಳೆಯ ರಾಷ್ಟ್ರೀಯ ಹೆದ್ದಾರಿ 48 ರ ಬೆಂಗಳೂರು, ಮಂಗಳೂರು ರಸ್ತೆಯ ವಾಹನ ಹಾಗೂ ಪಾದಾಚಾರಿಗಳು ಸಂಚರಿಸುವ ರಸ್ತೆಗೆ ಪುರಸಭಾ ಅಧಿಕಾರಿಗಳು ಶಾಮಿಯಾನ ಹಾಕಿ ಸಂಚಾರ ಅವ್ಯವಸ್ಥೆಗೆ ಉಂಟು ಮಾಡಿರುವುದು ಸಾರ್ವಜನಿಕರು ಆಕ್ರೋಶಕ್ಕೆ ಕಾರಣವಾಗಿದೆ,

Advertisement

ಅ 2 ಶನಿವಾರ ಪುರಸಭೆಯ ನೂತನ ಕಚೇರಿ ಉದ್ಘಾಟನೆಯಾಗಲಿದ್ದು ಈ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಾದುಸ್ವಾಮಿ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಪೌರಾಡಳಿತ ಸಚಿವ ಎಂಟಿಬಿ ನಾಗರಾಜು, ಸಂಸದ ಡಿ.ಕೆ.ಸುರೇಶ್, ಶಾಸಕ ಡಾ.ಹೆಚ್.ಡಿ.ರಂಗನಾಥ್  ಹಾಗೂ ಐಎಎಸ್, ಐಪಿಎಸ್ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮ ನಡೆಸಲು ಬಯಲು ರಂಗ ಮಂದಿರ ಹಾಗೂ ಜಿಕೆಬಿಎಂಎಸ್ ಶಾಲಾ ಅವರಣ ಇದ್ದರು ಇಲ್ಲಿ ಶಾಮಿಯಾನ ಹಾಕಿ ಕಾರ್ಯಕ್ರಮ ನಡೆಸದೆ, ಪುರಸಭಾ ಅಂಗಡಿ ಮಳಿಗೆಗಳ ಮುಂಭಾದ ಜನ ನೀಬಿಡ ಪ್ರದೇಶ,  ಹಾಗೂ ವಾಹನಗಳ ಸಂಚಾರಿಸುವ ಬಿ.ಎಂ ರಸ್ತೆಯ ಒಂದು ಭಾಗದ ರಸ್ತೆಗೆ ಶಾಮಿಯಾನ ಹಾಕಿ ರಸ್ತೆಯನ್ನು ಬಂದ್ ಮಾಡಿರುವುದು, ನಾಗರೀಕರು ಪುರಸಭೆ ಅಧಿಕಾರಿಗಳಿಗೆ ಇಡೀ ಶಾಪ ಹಾಕುತ್ತಿದ್ದಾರೆ.

ಇದನ್ನೂ ಓದಿ:“ಬಿಜೆಪಿ ತುಕ್ಡೆ-ತುಕ್ಡೆ ಮಾಡುತ್ತೇನೆ”: ಕಾಂಗ್ರೆಸ್ ನಾಯಕ ಕನ್ಹಯ್ಯ ಕುಮಾರ್

ಪೊಲೀಸರ ಮೌನ : ಸಾಮಾನ್ಯ ವ್ಯಕ್ತಿಯೊಬ್ಬನ್ನು ರಸ್ತೆಯಲ್ಲಿ ಬೈಕ್ ನಿಲ್ಲಿಸಿದರೆ, ಸಂಚಾರಕ್ಕೆ ಅಡ್ಡಿ ಪಡಿಸಲಾಗಿದೆ ಎಂದು ಆತನನ್ನು ಇಡಿದು ಪೊಲೀಸರು ದಂಡ ಹಾಕುತ್ತಾರೆ ಆದರೆ ಸಾರ್ವಜನಿಕ ರಸ್ತೆಯಲ್ಲಿ ಬೃಹತ್ ಶಾಮಿಯಾನ ಹಾಕಿ, ಸಂಚಾರಕ್ಕೆ ಅಡ್ಡಿ ಪಡಿಸಿ, ಕಾರ್ಯಕ್ರಮ ಮಾಡಲು ಮುಂದಾಗಿರುವ ಪುರಸಭಾ ಅಧಿಕಾರಿಗಳ ವಿರುದ್ದ ಪೊಲೀಸರು ಕ್ರಮಕೈಗೊಳ್ಳದೇ ಮೌನವಾಗಿರುವುದು ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ,

Advertisement

Udayavani is now on Telegram. Click here to join our channel and stay updated with the latest news.

Next