Advertisement

ಕುಣಿಗಲ್: ಮಾಜಿ ಶಾಸಕರ ಆಪ್ತ ಸಹಾಯಕನ ಅನುಮಾನಾಸ್ಪದ ಸಾವು

10:25 PM Feb 09, 2023 | Team Udayavani |

ಕುಣಿಗಲ್ : ಮಾಜಿ ಶಾಸಕರ ಆಪ್ತ ಸಹಾಕರ ತಾಲೂಕು ಕಚೇರಿಯ ಸಹಾಯಕ ಗುಮಾಸ್ತನೋರ್ವ ಗುರುವಾರ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

Advertisement

ತಾಲೂಕು ಕಚೇರಿಯ ಸಹಾಯಕ ಗುಮಾಸ್ತ ಪ್ರಕಾಶ್ (40) ಅನುಮಾನಾಸ್ಪದವಾಗಿ ಮೃತಪಟ್ಟಿರುವ ವ್ಯಕ್ತಿ.

ಘಟನೆ ವಿವರ : ಕುಣಿಗಲ್ ತಾಲೂಕು ಕಚೇರಿಯಲ್ಲಿ ಸಹಾಯಕ ಗುಮಾಸ್ತರಾಗಿ ಪ್ರಕಾಶ್ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು, ಈ ಮೊದಲ 2008 ರಲ್ಲಿ ಅಂದಿನ ಶಾಸಕ ಬಿ.ಬಿ.ರಾಮಸ್ವಾಮಿ ಗೌಡ ಅವರ ಸರ್ಕಾರಿ ಅಪ್ತ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು, ಆದರೆ ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಕಾಶ್ ಅವರು ತುಮಕೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದ್ದು ಬುಧವಾರ ಮನೆಯಲ್ಲೇ ಬಾಗಿಲು ಹಾಕಿಕೊಂಡು ಮೃತಪಟ್ಟಿದ್ದಾರೆ ಎನ್ನಲಾಗಿದ್ದು ಇದು ಹಲವು ಸಂಶಯಗಳಿಗೆ ಕಾರಣವಾಗಿದೆ. ಮನೆಯಲ್ಲಿ ಹೆಂಡತಿ ಮಕ್ಕಳು ಯಾರು ಇರಲಿಲ್ಲ ಎನ್ನಲಾಗಿದೆ, ಸದ್ಯ ಮೃತದೇಹವನ್ನು ತುಮಕೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿಗೆ ಕಾರಣ ಏನೆಂಬುದು ತಿಳಿಯಲಿದೆ.

ಇದನ್ನೂ ಓದಿ: ಗಣೇಶಪುರದಲ್ಲಿ ಅಪಘಾತ ಹೊಡೆದಾಟ ಪ್ರಕರಣ: ಕೊಲೆ ಯತ್ನ ಕೇಸು ದಾಖಲು?

Advertisement

Udayavani is now on Telegram. Click here to join our channel and stay updated with the latest news.

Next