Advertisement

ಕುಣಿಗಲ್: ಲಾರಿ ಡಿಕ್ಕಿ; ರೈತ ಸ್ಥಳದಲ್ಲೇ ಮೃತ್ಯು

09:06 AM Oct 09, 2022 | Team Udayavani |

ಕುಣಿಗಲ್: ಅಪರಿಚಿತ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ರೈತನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ರಾಜ್ಯ ಹೆದ್ದಾರಿ 33 ಟಿ.ಎಂ. ರಸ್ತೆ ಗವಿಮಠ ವಿಜಯ ಬ್ಯಾಂಕ್ ಮುಂಭಾಗ ಅ.9 ರ ಭಾನುವಾರ ಸಂಭವಿಸಿದೆ.

Advertisement

ತಾಲೂಕಿನ ಹುಲಿಯೂರುದುರ್ಗ ಹೋಬಳಿ ತಂಗಚ್ಚಹಳ್ಳಿ ಗ್ರಾಮದ ನಾಗರಾಜು (60) ಮೃತ ರೈತ.

ತನ್ನ ಗ್ರಾಮ ತಂಗಚ್ಚಹಳ್ಳಿಯಿಂದ ನಾಗರಾಜು ಸೊಪ್ಪಿನ ಮೋಟೆಯನ್ನು ದ್ವಿಚಕ್ರ ವಾಹನದಲ್ಲಿ ಇಟ್ಟುಕೊಂಡು ಮಾರಾಟ ಮಾಡಲು ಕುಣಿಗಲ್ ಪಟ್ಟಣದ ಸಂತೆಗೆ ಬರುತ್ತಿದ್ದ ಸಂದರ್ಭ ಅಪರಿಚಿತ ಲಾರಿ ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ಲಾರಿ ಚಾಲಕ ಲಾರಿ ನಿಲ್ಲಿಸದೇ ಪರಾರಿಯಾಗಿದ್ದಾನೆ.

ಸ್ಥಳೀಯ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next