Advertisement

Kundapura: ಬೆದರಿಕೆ; ಉದ್ಯಮಿ ದೂರು

08:33 PM Aug 21, 2024 | Team Udayavani |

ಕುಂದಾಪುರ: ಜಾಗದ ತಕರಾರಿನಲ್ಲಿ ಬೆದರಿಕೆ ಹಾಕಿದ್ದಾಗಿ ಉದ್ಯಮಿಯೊಬ್ಬರು ದೂರು ನೀಡಿದ್ದಾರೆ.

Advertisement

ಇಲ್ಲಿನ ಗೋಕುಲ್‌ ಕಾಂಪ್ಲೆಕ್ಸ್‌ನ ಕೆ. ಸೀತಾರಾಮ (73) ಅವರು ನಗರದ ಮುಖ್ಯ ರಸ್ತೆಯಲ್ಲಿರುವ ಜಾಗ ಖರೀದಿಸಿ ಗೋಕುಲ್‌ ಡಿಲಕ್ಸ್‌ ಹೊಟೇಲ್‌ ವ್ಯವಹಾರ ಮಾಡಿಕೊಂಡಿದ್ದಾರೆ. ಈ ಜಾಗದ ಬಗ್ಗೆ ನಾಗರಾಜ್‌ ಅವರು ಸಿವಿಲ್‌ ದಾವೆ ಹೂಡಿದ್ದು ಸೀತಾರಾಮ ಅವರ ಪರವಾಗಿ ಆದೇಶವಾಗಿದೆ. ಹಾಗಿದ್ದರೂ ಆಪಾದಿತರಾದ ನಾಗರಾಜ್‌ ಹಾಗೂ ಮಗ ಗಣೇಶ ಇತರ 3-4 ಜನರೊಂದಿಗೆ ಹೊಟೇಲ್‌ ಬಳಿ ಬಂದು ಹೊಟೇಲ್‌ ಜಾಗದಲ್ಲಿ ಇಟ್ಟ ಸಾಮಾಗ್ರಿಗಳನ್ನು ತೆಗೆಯಲು ಪ್ರಯತ್ನಿಸಿದುದರಿಂದ ಸೀತಾರಾಮ ಅವರು ಆಕ್ಷೇಪಿಸಿದ್ದಾರೆ. ಹಾಗಾಗಿ ಸೀತಾರಾಮ ಅವರನ್ನು ದೂಡಿ ಬೆದರಿಕೆ ಹಾಕಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next