Advertisement

ಎರಡು ಬೈಕ್ ಗಳ ನಡುವೆ ಅಪಘಾತ: ಐವರಿಗೆ ಗಾಯ

10:40 PM Feb 21, 2023 | Team Udayavani |

ಕುಂದಾಪುರ: ಕಟ್‌ಬೆಲ್ತೂರು ಗ್ರಾಮದ ಶ್ರೀ ಭದ್ರ ಮಹಾಕಾಳಿ ದೇವಸ್ಥಾನದ ಸಮೀಪ ಸತೀಶ ಅವರು ಬೈಕ್‌ನಲ್ಲಿ ನಿತೀಶ್‌ ಅವರನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಹೋಗುತ್ತಿದ್ದಾಗ ಕಟ್‌ಬೆಲ್ತೂರು ಕಡೆಯಿಂದ ದೇವಸ್ಥಾನದ ಕಡೆಗೆ ಜೀವನ್‌ ಮೋಗವೀರ ಅವರು ನಾಗೇಂದ್ರ ಆಚಾರ್ಯ ಅವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ಬರುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆದಿದ್ದಾರೆ.

Advertisement

ಪರಿಣಾಮ ನಾಗೇಂದ್ರ ಆಚಾರ್ಯ ಅವರಿಗೆ ಗಂಭೀರ ಗಾಯವಾಗಿದ್ದು, ಸತೀಶ, ನಿತೀಶ್‌, ಜೀವನ್‌ ಮೋಗವೀರ, ಪಾದಚಾರಿ ಅಕ್ಷಯ ಅವರಿಗೆ ಗಾಯಗಳಾಗಿವೆ. ನಾಗೇಂದ್ರ ಆಚಾರ್ಯ ಹೆಚ್ಚಿನ ಚಿಕಿತ್ಸೆಗೆ ಉಡುಪಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜೀವನ್‌ ಮೋಗವೀರ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಸತೀಶ, ನಿತೀಶ್‌ ಹಾಗೂ ಅಕ್ಷಯ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next