Advertisement

Kundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

01:11 AM Apr 25, 2024 | Team Udayavani |

ಕುಂದಾಪುರ: ಮಾನಸಿಕವಾಗಿ ನೊಂದಿದ್ದ ವ್ಯಕ್ತಿಯೊಬ್ಬರು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಟ್ಟಿಯಂಗಡಿ ಗ್ರಾಮದ ಪಾರ್ತಿಕಟ್ಟೆಯ ರೈಲು ಹಳಿಯಲ್ಲಿ ಎ. 23ರ ಸಂಜೆ 4.30ರಿಂದ ಎ. 24ರ ಬೆಳಗ್ಗೆ 7ರ ನಡುವಣ ಅವಧಿಯಲ್ಲಿ ಸಂಭವಿಸಿದೆ.

Advertisement

ಹೈದರಾಬಾದಿನಲ್ಲಿ ಹೊಟೇಲ್‌ ಕೆಲಸ ಮಾಡಿಕೊಂಡಿದ್ದ ಹಟ್ಟಿಯಂಗಡಿಯ ನಿವಾಸಿ ಜಯಂತ್‌ (38) ಮೃತರು. ಇವರು ಇತ್ತೀಚೆಗಷ್ಟೇ ಊರಿಗೆ ಬಂದಿದ್ದರು. ಸಾಲ ಇತ್ತೆಂದು ಹೇಳಲಾಗಿದ್ದು, ಇದರಿಂದಲೇ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಿಳಿದು ಬಂದಿದೆ. ಜಯಂತ್‌ ವಿವಾಹಿತರಾಗಿದ್ದು, ಒಂದು ಮಗುವಿದೆ. ಇವರ ತಮ್ಮ ವಸಂತ್‌ ಅವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next