Advertisement

Kinnigoli ಅಡಿಕೆ, ಹಿಂಗಾರ ಕಳವು ಮಾಡುತ್ತಿದ್ದ ವ್ಯಕ್ತಿಯ ಸೆರೆ

01:20 AM Apr 25, 2024 | Team Udayavani |

ಕಿನ್ನಿಗೋಳಿ: ಇಲ್ಲಿನ ಕೆಂಚನಕೆರೆಯ ಉದ್ಯಮಿ ಶ್ರೀಕಾಂತ್‌ ಶೆಟ್ಟಿ ಅವರ ತೋಟದಲ್ಲಿ ಅಡಿಕೆ ಹಾಗೂ ಹಿಂಗಾರ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಮನೆಯ ಕೆಲಸದವರು ಹಿಡಿದು ಮುಲ್ಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.

Advertisement

ಅಡಿಕೆ ಕಳ್ಳನನ್ನು ಅಂಗಾರ ಗುಡ್ಡೆ ನಿವಾಸಿ ವಿಜಯ (52) ಎಂದು ಗುರುತಿಸಲಾಗಿದೆ. .
ಬುಧವಾರ ಮಧ್ಯಾಹ್ನ ತೋಟದಿಂದ ಹಿಂಗಾರ ಕಳವು ಮಾಡುತ್ತಿದ್ದ ವೇಳೆ ತೋಟದ ಕಾರ್ಮಿಕ ನಾರಾಯಣ ಆರೋಪಿಯನ್ನು ಹಿಡಿಯಲೆತ್ನಿಸಿದಾಗ ಚೂರಿಯಿಂದ ಹಲ್ಲೆ ಮಾಡಲು ಮುಂದಾದ. ಈ ವೇಳೆ ನಾರಾಯಣ ಕಿರುಚಿದ್ದರಿಂದ ಉಳಿದ ಕೆಲಸದವರು ಬಂದು ಆರೋಪಿಯನ್ನು ಹಿಡಿದು ಮುಲ್ಕಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಸುಮಾರು ಎರಡು ಕ್ವಿಂಟಾಲ್‌ ಅಡಿಕೆ ಹಾಗೂ 500ಕ್ಕೂ ಹೆಚ್ಚು ಹಿಂಗಾರ ಕಳವು ಮಾಡಲಾಗಿದೆ ಎಂದು ಶ್ರೀಕಾಂತ್‌ ಶೆಟ್ಟಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next