Advertisement

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

12:15 AM Apr 29, 2024 | Team Udayavani |

ಕುಂದಾಪುರ: ಹೆಮ್ಮಾಡಿ ಗ್ರಾಮದ ಜಾಲಾಡಿ ಎಂಬಲ್ಲಿ ಹೆದ್ದಾರಿಯಲ್ಲಿ ಹರೀಶ ಅವರು ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆ ಏರಿ ಇನ್ನೊಂದು ಬದಿಗೆ ಪಲ್ಟಿಯಾಗಿದ್ದು, ಘಟನೆಯಲ್ಲಿ ಇಬ್ಬರಿಗೆ ಗಾಯವಾಗಿದೆ.

Advertisement

ಬೀದಿ ನಾಯಿ ಕಂಡು ಒಮ್ಮೆಲೆ ಬ್ರೇಕ್‌ ಹಾಕಿದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಮಧ್ಯದ ಡಿವೈಡರ್‌ ಮೇಲೆ ಚಲಿಸಿ ಹೆದ್ದಾರಿಯ ಇನ್ನೊಂದು ಬದಿ ರಸ್ತೆಯ ಮೇಲೆ ಮಗುಚಿ ಬಿದ್ದಿದೆ.

ಪರಿಣಾಮವಾಗಿ ಕಾರಿನ ಹಿಂಬದಿ ಆಸನದಲ್ಲಿದ್ದ ಸಂತೋಷ ಆಚಾರ್ಯ ( 38) ಮತ್ತು ಗುರುಪ್ರಸಾದ್‌ (20) ಅವರಿಗೆ ಗಾಯವಾಗಿದೆ.

ಚಾಲಕ ಹರೀಶ್‌ ಅವರಿಗೂ ಗಾಯವಾಗಿದ್ದು, ಸಂತೋಷ ಆಚಾರ್ಯ ಅವರು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಹಾಗೂ ಇನ್ನಿಬ್ಬರು ಕುಂದಾಪುರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next