Advertisement

Kundapura ಕಣ್ತಪ್ಪಿನಿಂದ ಹಣ ಕಳೆದುಕೊಂಡು ದೂರು ನೀಡಿ ವಂಚನೆಗೀಡಾದ!

12:33 AM Mar 18, 2024 | Team Udayavani |

ಕುಂದಾಪುರ: ದೇವಲ್ಕುಂದ ಗ್ರಾಮದ ಪ್ರದೀಪ (33) ಅವರು ಕಣ್ತಪ್ಪಿನಿಂದ ಅನ್ಯಖಾತೆಗೆ ಗೂಗಲ್‌ ಪೇ ಮೂಲಕ ಹಣ ರವಾನಿಸಿ ಮರಳಿ ಪಡೆಯಲು ಇನ್ಯಾವುದೋ ನಂಬರ್‌ಗೆ ದೂರು ನೀಡಿದಾಗ ಆತನೂ ವಂಚಿಸಿದ ಕುರಿತು ದೂರು ದಾಖಲಾಗಿದೆ.

Advertisement

ಪ್ರದೀಪ ಅವರು ತನ್ನ ಖಾತೆಯಿಂದ ಅಕºರ್‌ ಅಲಿ ಅವರಿಗೆ ಗೂಗಲ್‌ ಪೇ ಮೂಲಕ 25,700 ರೂ. ಪಾವತಿ ಮಾಡಿದ್ದು, ಅದು ಅಕºರ್‌ ಅಲಿ ಅವರ ಸಾಲ ಖಾತೆಗೆ ಹೋದ ಕಾರಣ ಅದನ್ನು ಹಿಂಪಡೆಯಲು ಬಯಸಿದ್ದರು. ಬ್ಯಾಂಕ್‌ ರಜೆ ಇದ್ದುದರಿಂದ ಗೂಗಲ್‌ನಲ್ಲಿ ಸರ್ಚ್‌ ಮಾಡಿ ಗೂಗಲ್‌ ಪೇ ಕಸ್ಟಮರ್‌ ಕೇರ್‌ ನಂಬರ್‌ ಎಂದು ದೊರಕಿದ ನಂಬರಿಗೆ ಕರೆ ಮಾಡಿದ್ದರು.

ಸ್ಪಂದಿಸಿದ ಅಪರಿಚಿತ ವ್ಯಕ್ತಿ 24 ಗಂಟೆಯೊಳಗೆ ಹಣ ಕೊಡಿಸುವುದಾಗಿ ಹೇಳಿದ್ದು, ಮರುದಿನ ಅದೇ ನಂಬರಿನಿಂದ ಪ್ರದೀಪ್‌ ಅವರಿಗೆ ಕರೆ ಮಾಡಿ ಗೂಗಲ್‌ ಪೇ ತೆರೆದು ಅಮೌಂಟ್‌ ಕಾಲಂನಲ್ಲಿ ಮೊಬೈಲ್‌ ನಂಬ್ರದ ಮೊದಲ 5 ನಂಬರ್‌ ನಮೂದಿಸಲು ತಿಳಿಸಿದ್ದ. ಆಗ ಪ್ರದೀಪ ಅವರ ಬ್ಯಾಂಕ್‌ ಖಾತೆಯಿಂದ 76,195 ರೂ. ಹಣ ಒಮ್ಮೆಲೇ ಕಡಿತವಾಗಿ ಮೊಬೈಲ್‌ 30 ನಿಮಿಷ ಸಂಪೂರ್ಣ ಸ್ತಬ್ಧವಾಯಿತು. ಸ್ನೇಹಿತನ ಮೊಬೈಲ್‌ನಿಂದ ಅಪರಿಚಿತನ ಮೊಬೈಲ್‌ ಸಂಪರ್ಕಿಸಲು ಮಾಡಿದ ಪ್ರಯತ್ನ ವಿಫಲವಾಯಿತು. ಈ ಬಗ್ಗೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next