Advertisement

Kundapura ಆಸ್ತಿ ಕಬಳಿಕೆಗೆ ನಕಲಿ ದಾಖಲೆ: ದೂರು

12:55 AM Aug 29, 2024 | Team Udayavani |

ಕುಂದಾಪುರ: ಜಲಜಾ ಅವರ ದೊಡ್ಡಮ್ಮ ಸಣ್ಣಮ್ಮ ಅವರು 2020ರಲ್ಲಿ ಮೃತಪಟ್ಟಿದ್ದು, ಅವರ ಆಸ್ತಿ ಕಬಳಿಕೆಗೆ ನಕಲಿ ದಾಖಲೆ ಮಾಡಲಾಗಿದೆ ಎಂದು ದೂರು ದಾಖಲಾಗಿದೆ.

Advertisement

ಆಪಾದಿತರಾದ ದಾರು, ಶೇಖರ, ಮಹೇಶ ಅವರು ಮೃತರ ಆಸ್ತಿ ಕಬಳಿಸುವ ಉದ್ದೇಶದಿಂದ ಜಲಜಾ ಅವರ ತಾಯಿ ಹಾಗೂ ದೊಡ್ಡಮ್ಮನಾದ ಸಣ್ಣಮ್ಮ, ದಾರು ಅವರ ಜಂಟಿ ಹೆಸರಿನಲ್ಲಿರುವ ಬ್ರಹ್ಮಾವರ ತಾಲೂಕು ಮಣೂರು ಗ್ರಾಮದ ಜಾಗಕ್ಕೆ ಸಂಬಂಧಿಸಿ ಮೃತ ಸಣ್ಣಮ್ಮ, ದಾರು ಅವರಿಗೆ ಜನರಲ್‌ ಪವರ್‌ ಆಫ್ ಅಟಾರ್ನಿ ಬರೆದುಕೊಟ್ಟಿದ್ದಾಗಿ, ಅದನ್ನು ಕುಂದಾಪುರದ ನೋಟರಿ ವಕೀಲರು ದೃಢೀಕರಿಸಿ, ಇನ್ನೊಬ್ಬ ವಕೀಲ ಗುರುತಿಸಿದ್ದಾಗಿ ನಕಲಿ ದಸ್ತಾವೇಜನ್ನು ತಯಾರಿಸಿ ಸಬ್‌ ರಿಜಿಸ್ಟರ್‌ ಕಚೆೇರಿಯಲ್ಲಿ ನೊಂದಾಯಿಸಿ ಮೋಸ ಮಾಡಿದ್ದಾಗಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next