Advertisement

Kundapura: ನಿಂದನೆ, ಜೀವ ಬೆದರಿಕೆ: ಕೇಸು ದಾಖಲು

09:05 PM Sep 20, 2024 | Team Udayavani |

ಕುಂದಾಪುರ: ಇಲ್ಲಿನ ತಹಶೀಲ್ದಾರ್‌ ಕಚೇರಿಯ ಹೊರಗೆ ಸೆ. 19ರಂದು ಚಂದ್ರ ಉಳ್ಳೂರು ಅವರ ಜತೆ ಕುಳಿತುಕೊಂಡಿರುವಾಗ ಅಲ್ಲಿಗೆ ಬಂದ ವಕ್ವಾಡಿ ಸಂಪತ್‌ ಕುಮಾರ್‌ ಅವರು ನನಗೆ ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿರುವುದಾಗಿ ಕೆ.ಸಿ. ರಾಜು ದೂರು ನೀಡಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಅಧಿಕ ರಕ್ತದೋತ್ತಡ: ವೃದ್ಧೆ ಸಾವು
ಗಂಗೊಳ್ಳಿ: ಇಲ್ಲಿನ ನಿವಾಸಿ ಗೌರಿ (65) ಅವರು ಅಧಿಕ ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದು, ತಲೆ ಸುತ್ತು ಬಂದು ಮನೆಯಲ್ಲಿ ಬಿದ್ದಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಸೆ. 20ರಂದು ಸಾವನ್ನಪ್ಪಿದ್ದಾರೆ. ಸೊಸೆ ಮಂಜುಳಾ ಅವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next