Advertisement

ಕಟಪಾಡಿ: ಬ್ಯಾರಿಕೇಡ್‌ -ಸರ್ವೀಸ್‌ ರಸ್ತೆಯ ಗುಂಡಿಗೆ ಮುಕ್ತಿ: ಹೆದ್ದಾರಿ ಇಲಾಖೆಯಿಂದ ಸ್ಪಂದನೆ

01:14 AM Apr 25, 2021 | Team Udayavani |

ಕಟಪಾಡಿ: ಮಂಗಳೂರಿನತ್ತ ತೆರಳುವ ಪೂರ್ವ ಪಾರ್ಶ್ವದ ಸರ್ವೀಸ್‌ ರಸ್ತೆಯಲ್ಲಿ ಕಳೆದ ಸುಮಾರು 8 ತಿಂಗಳಿನಿಂದ ಸೃಷ್ಟಿಯಾಗಿದ್ದ ದೊಡ್ಡ ಗಾತ್ರದ ಗುಂಡಿಯೊಂದನ್ನು ಹೆದ್ದಾರಿ ಇಲಾಖೆಯು ಎ.24ರಂದು ಡಾಮರೀಕರಣ ನಡೆಸಿದ್ದು, ಆ ಮೂಲಕ ಈ ಭಾಗದಲ್ಲಿ ತಲೆದೋರಿದ್ದ ಗುಂಡಿಯನ್ನು ಮುಚ್ಚಿ ಇಲ್ಲಿ ಇಡಲಾಗಿದ್ದ ಬ್ಯಾರಿಕೇಡ್‌ಗೆ ಮುಕ್ತಿಯನ್ನು ಕಲ್ಪಿಸಿದೆ.

Advertisement

ಸದಾ ವಾಹನ ದಟ್ಟಣೆ, ಜನನಿಬಿಡ ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್‌ ಬಳಿಯಲ್ಲಿನ ಈ ರಸ್ತೆಯು ಬಸ್‌ಗಳ ತಂಗುದಾಣವನ್ನು ಹೊಂದಿದ್ದು, ಸದಾ ವಾಹನ, ಜನದಟ್ಟಣೆಯಿಂದ ಕೂಡಿದ್ದು, ಈ ಗುಂಡಿಯಿಂದಾಗಿ ಸಮಸ್ಯೆ ಸೃಷ್ಟಿಯಾಗುತ್ತಿದೆ. ತ್ಯಾಜ್ಯದ ಗುಂಡಿಯಾಗಿಯೂ ಪರಿವರ್ತನೆ ಗೊಳ್ಳುತ್ತಿದೆ. ಜನ ಸಂಚಾರಕ್ಕೂ ತೊಡಕು ಉಂಟಾಗುತ್ತಿದೆ ಎಂಬ ಸಾರ್ವಜನಿಕರ, ವಾಹನ ಸವಾರರ ದೂರಿನ ಬಗ್ಗೆ ಜನಪರ ಕಾಳಜಿಯ ವರದಿಯನ್ನು “ಉದಯವಾಣಿ ಸುದಿನವು’ ಎ.22ರಂದು
ಪ್ರಕಟಿಸಿತ್ತು.

ಈ ಗುಂಡಿಯನ್ನು ಮುಚ್ಚಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಿದ ರಾಷ್ಟ್ರೀಯ ಹೆದ್ದಾರಿ 66ರ ನಿರ್ಮಾಣ ಗುತ್ತಿಗೆದಾರರ, ಇಲಾಖಾಧಿಕಾರಿಗಳ ತುರ್ತು ಸ್ಪಂದನೆಗೆ ವಾಹನ ಸವಾರರು, ಸಾರ್ವಜನಿಕರು ಕೃತಜ್ಞತೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next