Advertisement

 ವಿದ್ಯಾರ್ಥಿ ಪರಿಷತ್‌ ಕುಂದಾಪುರ ಘಟಕ: ತಾ|ಅಭ್ಯಾಸ ವರ್ಗ ಉದ್ಘಾಟನೆ

07:35 AM Aug 07, 2017 | |

ಕುಂದಾಪುರ: ಅಖೀಲ ಭಾರತ ವಿದ್ಯಾರ್ಥಿ ಪರಿಷತ್‌ ಕುಂದಾಪುರ ಘಟಕದ ಆಶ್ರಯದಲ್ಲಿ  ತಾಲೂಕು ಅಭ್ಯಾಸ ವರ್ಗ ಕಾರ್ಯಕ್ರಮ ಕುಂದಾಪುರದ ಶ್ರೀ ಕುಂದೇಶ್ವರ ದೇವಸ್ಥಾನದ ಕಲಾ ಭವನದಲ್ಲಿ ರವಿವಾರ ಜರಗಿತು.

Advertisement

ಕುಂದಾಪುರ ಪೊಲೀಸ್‌ ಠಾಣೆಯ ಪೊಲೀಸ್‌ ಉಪನಿರೀಕ್ಷಕ ನಾಸಿರ್‌ ಹುಸೇನ್‌ ಅವರು ತಾಲೂಕು ಅಭ್ಯಾಸ ವರ್ಗವನ್ನು ಉದ್ಘಾಟಿಸಿ ಮಾತನಾಡಿ, ಸಂಘಟನೆಯಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಎಲ್ಲ ಧರ್ಮ, ಜಾತಿಯನ್ನು ಪ್ರೀತಿಸುವ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಪರಸ್ಪರ ವಿಶ್ವಾಸದ ಮೂಲಕ ದೇಶದ ಉನ್ನತಿಗಾಗಿ ಹೋರಾಟ ನಡೆಸಿದ್ದಲ್ಲಿ ಜೀವನದಲ್ಲಿ ಗೆಲುವು ಕಾಣಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉಪನ್ಯಾಸಕ ರಾಜ್‌ಶಂಕರ್‌ ಅವರು ಸಂಘಟನೆಯ ಉದ್ದೇಶ ಹಾಗೂ ಸಂಘಟನೆಯಲ್ಲಿ ತೋರಿಸಬೇಕಾದ ಶಿಸ್ತು ಈ ಕುರಿತು ಸವಿಸ್ತಾರವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ  ಬಿ.ಬಿ. ಹೆಗ್ಡೆ ಕಾಲೇಜು  ಎಬಿವಿಪಿ ಪ್ರಮುಖ ಪವನ್‌, ಭಂಡಾರ್‌ಕಾರ್ಸ್‌ ಕಾಲೇಜಿನ ಎಬಿವಿಪಿ ಪ್ರಮುಖ ವೈಭವ್‌ ಭಟ್‌, ರಾಘವೇಂದ್ರ, ಬಾರಕೂರು ಕಾಲೇಜಿನ ಎಬಿವಿಪಿ ಪ್ರಮುಖ ಸತೀಶ್‌ ಉಪಸ್ಥಿತರಿದ್ದರು.ಸಂದೇಶ್‌ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರಖ್ಯಾತ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next