Advertisement

ಕುಂದಾಪುರ: ಮರಗಳು ಉರುಳಿ ಹಲವು ಮನೆಗಳಿಗೆ ಹಾನಿ

12:34 PM May 23, 2018 | Team Udayavani |

ಕುಂದಾಪುರ: ತಾಲೂಕಿನಾದ್ಯಂತ ಮಂಗಳವಾರ ಬೆಳಗ್ಗಿನ ಜಾವ ಉತ್ತಮ ಮಳೆಯಾಗಿದ್ದು, ಭಾರೀ ಗಾಳಿ-ಸಿಡಿಲಿಗೆ ಹಲವೆಡೆ ಮನೆಗಳ ಮೇಲೆ ಮರ ಬಿದ್ದು, ಅಪಾರ ಹಾನಿಯಾಗಿದೆ. ರಸ್ತೆಯ ಮೇಲೆ ಮರಗಳು ಉರುಳಿ ಬಿದ್ದು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. 

Advertisement

ಕೋಡಿಯ ಸೋನ್ಸ್‌ ಶಾಲೆಯ ಹತ್ತಿರ ಶ್ಯಾಮ ಅವರ ಮನೆಗೆ ತೆಂಗಿನ ಮರ ಬಿದ್ದು, ಸುಮಾರು 50,000 ರೂ. ನಷ್ಟ ಸಂಭವಿಸಿದೆ. ಜಡ್ಕಲ್‌ ಗ್ರಾಮದ ಸೆಳ್ಕೊàಡಿನ ಗೋಳಿಗುಡ್ಡಿ ಸರ್ವೇಶ್ರೀ ಪೂಜಾರ್ತಿ ಅವರ ಹೊಸ ಮನೆಯ ಮೇಲೆ ಮರ ಬಿದ್ದು, ಭಾಗಶಃ ಹಾನಿಯಾಗಿದೆ.

ಯಡಾಡಿ-ಮತ್ಯಾಡಿ, ಮೊಳಹಳ್ಳಿ, ಗೋಪಾಡಿ, ಬೀಜಾಡಿಯಲ್ಲಿ ಹಲವು ಮನೆಗಳ ಮೇಲೆ ಮರ ಬಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ.

ಮೀಟರ್‌ ಬೋರ್ಡ್‌ಗೆ ಹಾನಿ
ಜನ್ನಾಡಿಯ ವಿಷ್ಣುಮೂರ್ತಿ ಅಡಿಗ ಅವರ ಮನೆಯ ವಿದ್ಯುತ್‌ ಮೀಟರ್‌ ಬೋರ್ಡಿಗೆ ಸಿಡಿಲು ಬಡಿದು ಸಾವಿರಾರು ರೂ. ನಷ್ಟ ಉಂಟಾಗಿದೆ. ಬಿದ್ಕಲ್‌ಕಟ್ಟೆ ಹಾಗೂ ಬೆಳ್ಳಾಲದಲ್ಲಿ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. 

ಅಂಪಾರಿನ ಮೂರುಕೈ ಹಿ.ಪ್ರಾ. ಶಾಲೆ ಬಳಿ ಹಾಗೂ ಗುಡಿಬೆಟ್ಟುವಿನಲ್ಲಿ ಅನೇಕ ಮರಗಳು, ಮೊಳಹಳ್ಳಿ ಭಾಗದಲ್ಲಿ ಅಡಿಕೆ ಮರಗಳು ಉರುಳಿವೆ. ಶೇಡಿಮನೆ, ಮರೂರಿನಲ್ಲಿ ಮರ ಬಿದ್ದಿದ್ದು, ಮರೂರಿನಲ್ಲಿ ಬಾಬು ನಾಯ್ಕ ಮನೆಗೆ ಮರ ಬಿದ್ದು ಸುಮಾರು 35 ಸಾವಿರ ರೂ. ಹಾನಿ, ಬಾಂಡ್ಯದಲ್ಲಿ ಮನೆಗೆ ಸಿಡಿಲು ಬಡಿದು, ಕ್ರೋಢಬೈಲೂರಿನಲ್ಲಿ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. 

Advertisement

ಹಲವೆಡೆ ಮರಗಳು ಬಿದ್ದು, ವಿದ್ಯುತ್‌ ಕಂಬಗಳು ಉರುಳಿ ಬಿದ್ದ ಪರಿಣಾಮ ತಾಲೂಕಿನ ಹಲವೆಡೆ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು. ಕುಂದಾಪುರ, ತೆಕ್ಕಟ್ಟೆ ಮೊದಲಾದ ಪ್ರದೇಶಗಳಲ್ಲಿ ಮಂಗಳವಾರ ದಿನವಿಡೀ ಇಂಟರ್‌ನೆಟ್‌ ಸಂಪರ್ಕ ಕೈಕೊಟ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next