Advertisement
ಈಗಾಗಲೇ ಒಂದೆರಡು ಮಳೆಯಾಗಿದ್ದರಿಂದ ಕುಂದಾಪುರ ಭಾಗದಲ್ಲಿ ರೈತರು ಗದ್ದೆಗಳನ್ನು ಉಳುಮೆ ಮಾಡಿ, ಹದ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಬೀಜಗಳನ್ನು ಬಿತ್ತಲಾಗಿದ್ದು, ಇನ್ನೊಂದು ವಾರದಲ್ಲಿ ಕೃಷಿ ಕಾರ್ಯ ಮತ್ತಷ್ಟು ಚುರುಕು ಪಡೆದುಕೊಳ್ಳಲಿದೆ. ಕಳೆದ ಬಾರಿ ಮುಂಗಾರಿನಲ್ಲಿ 17,850 ಹೆಕ್ಟೇರ್ ಬಿತ್ತನೆ ಕಾರ್ಯ ನಡೆದರೆ, ಈ ಬಾರಿ ಅದಕ್ಕಿಂತಲೂ ಹೆಚ್ಚಿನ ಭತ್ತದ ಬಿತ್ತನೆಯ ಗುರಿಯನ್ನು ಹೊಂದಲಾಗಿದೆ.
ಎಂ.ಒ. 4 ಭತ್ತದ ಬೀಜದ ಕೊರತೆ ನೀಗಿಸಲು ಕೇರಳದಿಂದ ಈ ಬಾರಿ ಕುಂದಾಪುರ ಕೃಷಿ ಕೇಂದ್ರಕ್ಕೆ ತಲಾ 160 ಕೆ.ಜಿ. ಯಷ್ಟು ಎಂ.ಒ. 21 ಬೀಜ ಹಾಗೂ ಎಂ.ಒ. 22 ಭತ್ತದ ಬೀಜವನ್ನು ತರಿಸಲಾಗಿದೆ. ಎಂ.ಒ. 4 ಭತ್ತದ ಬೀಜಗಳಿಗೆ ಪರ್ಯಾಯ ವ್ಯವಸ್ಥೆ
ಕರಾವಳಿ ಭಾಗದಲ್ಲಿ ಹೆಚ್ಚಿನ ರೈತರು ಹೆಚ್ಚು ಫಸಲು ತರುವ ಎಂ.ಒ. 4 ಭತ್ತದ ಬೀಜವನ್ನು ಬಳಸುತ್ತಿದ್ದು, ಆದರೆ ಈ ಬಾರಿ ಶಿವಮೊಗ್ಗದಲ್ಲಿ ಹವಾಮಾನ ವೈಪರೀತ್ಯ ಇನ್ನಿತರ ಕಾರಣದಿಂದ ಅಲ್ಲಿ ಉತ್ಪಾದನೆ ಕಡಿಮೆಯಾಗಿತ್ತು. ಆ ಕಾರಣದಿಂದ ಉಡುಪಿ ಜಿಲ್ಲೆಯ ಎಲ್ಲ ಕಡೆಗಳಲ್ಲಿ ಎಂ.ಒ. 4 ಬೀಜಗಳ ಕೊರತೆಯಿದೆ. ಆದರೆ ಅದಕ್ಕೆ ಪರ್ಯಾಯವಾಗಿ ಜ್ಯೋತಿ, ಉಮಾ, ಎಂ.ಒ.21, ಎಂ.ಒ. 22 ಭತ್ತದ ಬೀಜಗಳನ್ನು ತರಿಸಲಾಗಿದೆ.
Related Articles
ವರ್ಷ ಗುರಿ ಆಗಿರುವ ಬಿತ್ತನೆ
2017 18,250 17,850
2016 18250 17,550
2015 18,250 17,250
(ಗುರಿ ಹಾಗೂ ಆಗಿರುವ ಬಿತ್ತನೆ ಹೆಕ್ಟೇರ್ಗಳಲ್ಲಿ )
Advertisement
ಬಿತ್ತನೆ ಬೀಜಗಳ ಕೊರತೆಯಿಲ್ಲಕುಂದಾಪುರ ತಾಲೂಕು ವ್ಯಾಪ್ತಿಯ ವಂಡ್ಸೆ, ಬೈಂದೂರು ಹಾಗೂ ಕುಂದಾಪುರದ 3 ವಲಯಗಳಲ್ಲಿ ಎಲ್ಲಿಯೂ ಬಿತ್ತನೆ ಬೀಜದ ಕೊರತೆಯಿಲ್ಲ. ಈಗಾಗಲೇ ಎಲ್ಲ ರೈತರ ಸೇವಾ ಕೇಂದ್ರಗಳಿಗೆ ಬಿತ್ತನೆ ಬೀಜಗಳನ್ನು ಪೂರೈಕೆ ಮಾಡಲಾಗಿದೆ. ಎಂ.ಒ.4 ಬೀಜ 320 ಕ್ವಿಂಟಾಲ್ ನಷ್ಟು ಬಂದಿದೆ. ಅದನ್ನು ವಿತರಿಸಲಾಗಿದೆ. ಕೊರತೆಯಾಗುವುದಕ್ಕೆ ಬದಲಿಯಾಗಿ ಬೇರೆ ತಳಿಯ ಬೀಜಗಳನ್ನು ತರಿಸಲಾಗಿದೆ.
– ವಿಟಲ್ ರಾವ್, ಸಹಾಯಕ ಕೃಷಿ ನಿರ್ದೇಶಕರು, ಕುಂದಾಪುರ ತಾಲೂಕು