Advertisement

ಚೆಕ್‌ಪೋಸ್ಟ್‌ಗೆ ಕುಂದಾಪುರ ಉಪವಿಭಾಗಾಧಿಕಾರಿ ಭೇಟಿ

09:54 PM Apr 22, 2020 | Sriram |

ಪಡುಬಿದ್ರಿ: ಕೋವಿಡ್-19 ಮಹಾಮಾರಿ ಹರಡದಂತೆ ಉಡುಪಿ ಜಿಲ್ಲೆಯ ಗಡಿ ಹೆಜಮಾಡಿಯಲ್ಲಿ ಸೀಲ್‌ಡೌನ್‌ ಮಾಡಿ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದ್ದು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಕೆ. ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಅವರು ಗಡಿ ತಪಾಸಣಾ ಕೇಂದ್ರ‌ದಲ್ಲಿನ ದಾಖಲೆಗಳನ್ನು ಪರಿಶೀಲಿಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಿಬಂದಿಗೆ ಸೂಚನೆ ನೀಡಿದರು. ಗಡಿಯಲ್ಲಿ ಅನ್ಯ ಜಿಲ್ಲೆಗಳ ವಾಹನಗಳ ಸಂಚಾರ ಮಂಗಳವಾರ ಹೆಚ್ಚಾಗಿದ್ದು, ವಾಹನಗಳ ಪಾಸ್‌ಗಳನ್ನು ತಪಾಸಣೆ ನಡೆಸಿದರು. ಮಾಸ್ಕ್ ಧರಿಸದೆ ವಾಹನ ಚಲಾವಣೆ ಮಾಡುತ್ತಿರುವ ಸವಾರರಿಗೆ ಖಡಕ್‌ ಸೂಚನೆ ನೀಡಿದರು. ಅವರೊಂದಿಗೆ ಪ್ರಾದೇಶಿಕ ಅರಣ್ಯ ಅಧಿಕಾರಿ ಕ್ಲಿಫರ್ಡ್‌ ಲೋಬೋ, ನೋಡೆಲ್‌ ಅಧಿಕಾರಿ ಉದಯಕುಮಾರ್‌, ಹೆಜಮಾಡಿ ಗ್ರಾಮ ಲೆಕ್ಕಿಗ ಅರುಣ್‌ಕುಮಾರ್‌, ಪಡುಬಿದ್ರಿ ಠಾಣೆ ಎಎಸ್‌ಐ ಸುರೇಶ್‌ ಭಟ್‌ ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next