Advertisement

ಕೋಟ: ಪ್ರೇಮ ವೈಫಲ್ಯ; ಗೆಳತಿಗೆ ಹಲ್ಲೆಗೈದು ಆತ್ಮಹತ್ಯೆಗೆ ಶರಣಾದ ಯುವಕ

11:30 AM Dec 30, 2021 | Team Udayavani |

ಕೋಟ : ಪ್ರೇಮ ವೈಫಲ್ಯದಿಂದ ಮನನೊಂದು ಯುವಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಶಿರಿಯಾರ ಸಮೀಪ ಹೆಸ್ಕಾತ್ತೂರಿನಲ್ಲಿ ಡಿ. 29ರಂದು ಸಂಭವಿಸಿದೆ.

Advertisement

ಸ್ಥಳೀಯ ಯುವಕ, ರಿಕ್ಷಾ ಚಾಲಕ ರಾಘವೇಂದ್ರ ಕುಲಾಲ್‌ (35) ಆತ್ಮಹತ್ಯೆಗೆ ಶರಣಾದ ಯುವಕ. ಆತ ಸ್ಥಳೀಯ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದು, ಆ ಪ್ರೇಮ ವೈಫಲ್ಯಗೊಂಡಿದ್ದರಿಂದ ಮನನೊಂದಿದ್ದನು.

ಬುಧವಾರ ಯುವತಿಯ ಮೇಲೂ ಮರಣಾಂತಿಕ ಹಲ್ಲೆ ನಡೆಸಿದ್ದು, ಯುವತಿ ಅದೃಷ್ಟವಶಾತ್‌ ಹೆಚ್ಚಿನ ಅಪಾಯವಿಲ್ಲದೆ ಪಾರಾಗಿದ್ದಾಳೆ. ಅನಂತರ ಮನೆಗೆ ತೆರಳಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಯ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next