Advertisement

ಕುಂದಾಪುರ –ಬೈಂದೂರು, ಬಸ್ರೂರು, ಕೋಟೇಶ್ವರದಲ್ಲಿ ತೆರೆಯದ ಶಾಲೆಗಳು

01:18 AM Jul 10, 2019 | Team Udayavani |

ಕುಂದಾಪುರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರು ಮಂಗಳವಾರ ಪ್ರತಿಭಟನೆಗೆ ಕರೆ ನೀಡಿದ್ದರಿಂದ ಕುಂದಾಪುರ ಹಾಗೂ ಬೈಂದೂರು ವಲಯದ ಬಹುತೇಕ ಎಲ್ಲ ಶಾಲೆಗಳು ರಜೆ ಸಾರಿದ್ದು, ಯಾವುದೇ ತರಗತಿಗಳು ನಡೆಯಲಿಲ್ಲ.

Advertisement

ಕುಂದಾಪುರ ವಲಯದ 130 ಶಾಲೆಗಳ ಸುಮಾರು 470 ಶಿಕ್ಷಕರು ಹಾಗೂ ಬೈಂದೂರು ವಲಯದ 200 ಶಾಲೆಗಳ 700 ಮಂದಿ ಶಿಕ್ಷಕರು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದ ಮುಷ್ಕರದಲ್ಲಿ ಭಾಗವಹಿಸಿದ್ದು, ಇದಕ್ಕೆ ಕುಂದಾಪುರ ತಾಲೂಕು ಶಿಕ್ಷಕರ ಸಂಘವು ಕೂಡ ಬೆಂಬಲ ವ್ಯಕ್ತಪಡಿಸಿತ್ತು.

ಕುಂದಾಪುರ ವಲಯದಲ್ಲಿ ಸುಮಾರು 10 ಶಾಲೆಗಳಲ್ಲಿ ಇಲ್ಲಿ ಪದವೀಧರ ಶಿಕ್ಷಕರಿದ್ದರಿಂದ ಮಾತ್ರ ತೆರೆಯಲಾಗಿತ್ತು. ಆದರೆ ಇಲ್ಲಿಯೂ ಕೂಡ 1 ರಿಂದ 5 ನೇ ತರಗತಿಯವರೆಗಿನ ಮಕ್ಕಳಿಗೆ ಮಾತ್ರ ಪಾಠ ಮಾಡಿಲ್ಲ ಎಂದು ತಿಳಿದು ಬಂದಿದೆ. ಹೆಚ್ಚಿನ ಶಾಲೆಗಳಲ್ಲಿ ಶಿಕ್ಷಕರೇ ಮುನ್ನ ದಿನವೇ ಮಕ್ಕಳಿಗೆ ಶಾಲೆಗೆ ಬರಬೇಡಿ, ಪ್ರತಿಭಟನೆ ಇದೆ ಎನ್ನುವುದಾಗಿ ತಿಳಿಸಿದ್ದರಿಂದ ಯಾವುದೇ ಗೊಂದಲ ಅಥವಾ ತೊಂದರೆಗಳಾದ ಬಗ್ಗೆ ವರದಿಯಾಗಿಲ್ಲ.

ಬಸ್ರೂರು: ಶಾಲೆಗಳು ಬಂದ್‌

ಬಸ್ರೂರು: ಬಸ್ರೂರು, ಕಂದಾವರ, ಮೂಡ್ಲಕಟ್ಟೆ , ಕಂಡ್ಲೂರು, ಆನಗಳ್ಳಿ, ಬಳ್ಕೂರು ಮುಂತಾದೆಡೆ ಮಕ್ಕಳು ಶಾಲೆಗೆ ಬಾರದೆ ಬಾಗಿಲೇ ತೆಗೆಯಲಿಲ್ಲ. ಆದರೆ ಈ ಪ್ರತಿಭಟನೆ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿಗೆ ಅನ್ವಯಿಸಲಿಲ್ಲ. ಉನ್ನತೀಕರಿಸಿದ ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪದವೀಧರ ಶಿಕ್ಷಕರು ಮಾತ್ರ ಇಂದಿನ ಪ್ರತಿಭಟನೆಯಲ್ಲಿ ಪಾಲ್ಗೊಂಡಿರಲಿಲ್ಲ. ಉಳಿದಂತೆ ಎಲ್ಲ ಶಿಕ್ಷಕರು ಭಾಗವಹಿಸಿ ಪ್ರತಿಭಟನೆ ಯಶಸ್ವಿಯಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next