Advertisement

ಕುಂದಾಪುರ : ಅಪಘಾತದಲ್ಲಿ ಬಿಜೆಪಿ ಮುಖಂಡ ದುರ್ಮರಣ 

04:53 PM May 09, 2018 | |

ಕುಂದಾಪುರ: ಇಲ್ಲಿನ ಅಂಪಾರು ಬಳಿ ಕಾರು ಢಿಕ್ಕಿಯಾದ ಪರಿಣಾಮ  ಬೈಕ್‌ ಸವಾರರಾಗಿದ್ದ ಬಿಜೆಪಿ ನಾಯಕ ಮಹೇಶ್‌ ಹೆಗ್ಡೆ ದುರ್ಮರಣಕ್ಕೀಡಾದ ದುರ್ಘ‌ಟನೆ ಬುಧವಾರ ನಡೆದಿದೆ. 

Advertisement

ಮೃತರು ಬೇಳೂರು ಗ್ರಾ.ಪಂ. ಮಾಜಿ ಸದಸ್ಯರಾಗಿದ್ದು, ಇವರ ಪತ್ನಿ ಶ್ರೀ ಲತಾ ಮಹೇಶ್ ಹೆಗ್ಡೆ ತಾ.ಪಂ ಸದಸ್ಯೆ ಯಾಗಿದ್ದಾರೆ. 

 ಬೆಳಗ್ಗೆ ಬೇಳೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀ ನಿವಾಸ ಶೆಟ್ಟಿ ಪರ ಮನೆ ಮನೆಗೆ  ಸ್ಥಳೀಯ ಕಾರ್ಯಕರ್ತರೊಂದಿಗೆ ತೆರಳಿ ಪ್ರಚಾರಗೈದು ವಾಪಾಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. 

ಶ್ರೀ ನಿವಾಸ ಶೆಟ್ಟಿ ಪರ ಮನೆ ಮನೆಗೆ  ಸ್ಥಳೀಯ ಕಾರ್ಯಕರ್ತರೊಂದಿಗೆ ತೆರಳಿ ಪ್ರಚಾರಗೈದು ನಂತರ ಅಂಪಾರು ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಮಹೇಶ್‌ ಹೆಗ್ಡೆ ನಿಧನದಿಂದಾಗಿ  ಕುಂದಾಪುರದಲ್ಲಿ ನಡೆಯಬೇಕಾಗಿದ್ದ ಬಿಜೆಪಿ ಪಾದಯಾತ್ರೆಯನ್ನು ರದ್ದು ಮಾಡಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next