Advertisement

ಆನ್ ಲೈನ್ ಶಿಕ್ಷಣ ವಿರೋಧಿಸಿ ಪ್ರತಿಭಟನೆ ಮಾಡುವ ಎಚ್ಚರಿಕೆ: NSUI ರಾಜ್ಯ ‌ಸಂಚಾಲಕನ ಬಂಧನ

10:49 AM Jun 29, 2020 | keerthan |

ಚಿಕ್ಕಬಳ್ಳಾಪುರ: ಜಿಲ್ಲೆಗೆ ರಾಜ್ಯ ಪ್ರಾಥಮಿಕ ‌ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಆಗಮನದ ಹಿನ್ನೆಲೆಯಲ್ಲಿ ಆನ್ ಲೈನ್ ಶಿಕ್ಷಣ ನೀಡುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ತಯಾರಿಸಿ‌ದ್ದ ರಾಜ್ಯ ಎನ್ಎಸ್ ಯುಐ ರಾಜ್ಯ ಸಂಚಾಲಕ‌ ಕುಂದಲಗುರ್ಕಿ ಕೆ.ಎನ್ ಮುನೀಂದ್ರರನ್ನು ಜಿಲ್ಲೆಯ‌ ದಿಬ್ಬೂರಹಳ್ಳಿ ಪೊಲೀಸರು ಬಂಧಿಸಿದ್ದಾರೆ.

Advertisement

ಸೋಮವಾರ ಜಿಲ್ಲೆಗೆ‌ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಗಮನದ ಹಿನ್ನಲೆಯಲ್ಲಿ ಶಿಡ್ಲಘಟ್ಟ ‌ತಾಲೂಕಿನ ಕುಂದಲಗುರ್ಕಿ ಗ್ರಾಮದ ನಿವಾಸಿ ಮುನೀಂದ್ರ ಸಚಿವರಿಗೆ ಘೇರಾವ್ ಹಾಕಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಇದರ ಸುಳಿವು ಅರಿತ ಪೊಲೀಸರು ಸೋಮವಾರ ಬೆಳಗಿನ ಜಾವ ಅವರ ನಿವಾಸದ ಮೇಲೆ ದಾಳಿ ನಡೆಸಿ ಬಂಧಿಸಿ‌‌ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಇಟ್ಟಿದ್ದಾರೆ.

ಇಂದು‌ ಶಿಡ್ಲಘಟ್ಟ ತಾಲೂಕಿಗೂ ಸಹ‌ ಸಚಿವ ಸುರೇಶ್ ಕುಮಾರ್‌ ಬೇಟಿ ನೀಡಿ ಎಸ್ಎಸ್ಎಲ್ ಸಿ ಪರೀಕ್ಷಾ ಕೇಂದ್ರಗಳನ್ನು ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next