Advertisement

ಪಾದರಕ್ಷೆ ಚಿಹ್ನೆ ಬಳಸಲು ಅಭ್ಯರ್ಥಿಗಳ ಹಿಂದೇಟು

07:40 AM Apr 26, 2018 | |

ಕುಂದಗೋಳ: ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವವರಿಗೆ ತಮ್ಮ ಚಿಹ್ನೆ ಆಯ್ದುಕೊಳ್ಳಲು ತಹಶೀಲ್ದಾರ್‌ ಕಾರ್ಯಾಲಯದ ನಾಮಫಲಕದಲ್ಲಿ ಪಟ್ಟಿ ಅಂಟಿಸಲಾಗಿದ್ದು,ಅದರಲ್ಲಿ ಪಾದರಕ್ಷೆ ಚಿಹ್ನೆ ಕೂಡ ಇದೆ. 

Advertisement

ನಾಮಫಲಕದಲ್ಲಿನ ಚಿಹ್ನೆಗಳಲ್ಲಿ ತೆಂಗಿನಕಾಯಿ, ಚಹ ಕಪ್ಪು, ಕುಕ್ಕರ್‌, ಕತ್ತರಿ, ರಾಟಿ, ವಿದ್ಯುತ್‌ ಕಂಬ, ಇಸ್ತ್ರಿ ಪೆಟ್ಟಿಗೆ, ಪೆನ್ನು ಸೇರಿದಂತೆ ಅನೇಕ ಚಿಹ್ನೆಗಳಿವೆ.

ಇದರ ನಡುವೆ ಪಾದರಕ್ಷೆ ಚಿಹ್ನೆ ಇಟ್ಟಿದ್ದರಿಂದ ಅಭ್ಯರ್ಥಿಗಳು ಪಾದರಕ್ಷೆ ಚಿಹ್ನೆ ಆಯ್ದುಕೊಳ್ಳಲು ಹಿಂದೇಟುಹಾಕುತ್ತಿದ್ದಾರೆ ಎನ್ನಲಾಗಿದೆ. ಈ ಕುರಿತು ಪಕ್ಷೇತರ ಅಭ್ಯರ್ಥಿ ನಿಂಗಪ್ಪ ಬಡಿಗೇರ ಮಾತನಾಡಿ, “ಮತದಾರರ ಬಳಿ ಪಾದರಕ್ಷೆ ಹಿಡಿದುಕೊಂಡು ಮತ ನೀಡಿ ಎನ್ನುವುದು ಹೇಗೆ’ ಎಂದು ನಗೆ ಬೀರಿದರು.

Advertisement

Udayavani is now on Telegram. Click here to join our channel and stay updated with the latest news.

Next