Advertisement

Kumta: ಬಾಡ ಗ್ರಾಮ ಪಂಚಾಯತ್ ಪಿಡಿಓ ಅಮಾನತು

07:07 PM Aug 19, 2023 | Team Udayavani |

ಕುಮಟಾ : ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡಿದ ಕಾರಣಕ್ಕೆ ಜಿಲ್ಲಾ ಪಂಚಾಯತ್ ಸಿಇಓ ಈಶ್ವರ ಕಾಂದೂ ಅವರು ತಾಲೂಕಿನ ಬಾಡ ಗ್ರಾಮ ಪಂಚಾಯತ್ ಪಿಡಿಓ ಕಮಲಾ ಹರಿಕಂತ್ರ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

Advertisement

ತಾಲೂಕಿನ ಬಾಡದ ನಿವಾಸಿ ನಂದಾ ಪರಮೇಶ್ವರ ನಾಯ್ಕ ಎನ್ನುವವರು ಕಳೆದ ಹಲವಾರು ವರ್ಷಗಳಿಂದ ಬಾಡದ ಗ್ರಾ.ಪಂ ನಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರನ್ನು 2018ರಲ್ಲಿ ಅಂದಿನ ಪಿಡಿಓ ಅವರು ಕೆಲಸದಿಂದ ವಜಾ ಮಾಡಿದ್ದರು. ನಂತರ ಪಂಚಾಯತ್‌ನಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಇನ್ನೊಬ್ಬ ಮಹಿಳೆಯನ್ನು ಕಂಪ್ಯೂಟರ್ ಆಪರೇಟರ್ ಆಗಿ ನೇಮಕ ಮಾಡಿಕೊಂಡಿದ್ದರು.

ಈ ಆದೇಶವನ್ನು ಪ್ರಶ್ನಿಸಿ ನಂದಾ ಅವರು ಧಾರವಾಡ ಹೈಕೋರ್ಟ್‌ ಮೊರೆ ಹೋಗಿದ್ದರು. ಈ ಪ್ರಕರಣದ ಬಗ್ಗೆ ವಿಚಾರಣೆ ಕೈಗೊಂಡ ನ್ಯಾಯಾಧೀಶರು ಆದೇಶ ಮಾಡಿದ್ದು, ಆದೇಶದಲ್ಲಿ ಈಗಿರುವ ಕಂಪ್ಯೂಟರ್ ಆಪರೇಟರ್‌ಗೂ ಹಾಗೂ ನಂದಾ ಅವರಿಗೂ ಯಾವುದೇ ತೊಂದರೆಯಾಗದಂತೆ ಇವರನ್ನು ಮರು ನೇಮಕ ಮಾಡಿಕೊಳ್ಳುವಂತೆ ಹೈಕೋರ್ಟ್ ತೀರ್ಪು ನೀಡಿತ್ತು. ಆದರೆ ನ್ಯಾಯಾಲಯದ ತೀರ್ಪುನ್ನು ಪಿಡಿಒ ಕಮಲಾ ಹರಿಕಂತ್ರ ಅವರನ್ನು ಪಾಲಿಸಿರಲಿಲ್ಲ ಎನ್ನಲಾಗಿದ್ದು, ಅಲ್ಲದೇ ಈ ಸಂಬಂಧ ಜಿಲ್ಲಾ ಪಂಚಾಯತ್ ಸಿಇಒ ಈಶ್ವರ ಕಾಂದೂ ಅವರು ನೀಡಿದ ನೋಟಿಸ್‌ಗೂ ಯಾವುದೇ ಸಮರ್ಪಕ ಉತ್ತರ ನೀಡಿರಲಿಲ್ಲ. ಹೀಗಾಗಿ ಈ ಬಗ್ಗೆ ಕ್ರಮ ಕೈಗೊಂಡ ಜಿಪಂ ಸಿಇಓ ಅವರು ಬಾಡ ಗ್ರಾಪಂ ಪಿಡಿಓ ಕಮಲಾ ಹರಿಕಂತ್ರ ಅವರನ್ನು ಅಮಾನತುಗೊಳಿಸಿ, ಮುಂದಿನ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆಂದು ಎಂದು ತಾಲೂಕು ಪಂಚಾಯತ್ ಇಓ ನಾಗರತ್ನ ನಾಯಕ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next